2026-03-07 02:23:08

Rashika Mandanna and Vijay Devarakonda wedding | ಫೆ 26ರಂದು ರಶಿಕಾ ಮಂದಣ್ಣ ವಿಜಯ್ ದೇವರಕೊಂಡ ಮದುವೆ | Speed News Kannada

Rashika Mandanna and Vijay Devarakonda wedding | ಫೆ 26ರಂದು ರಶಿಕಾ ಮಂದಣ್ಣ ವಿಜಯ್ ದೇವರಕೊಂಡ ಮದುವೆ | Speed News Kannada

ಮುಂಬೈ, ಫೆ.19- ಕನ್ನಡತಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಜೋಡಿ ಫೆ. 26 ರಂದು ಉದಯಪುರದಲ್ಲಿ ವಿವಾಹವಾಗಲಿದ್ದಾರೆ ಎಂದು ವರದಿಯಾಗಿದೆ. ಮದುವೆ ಬಗ್ಗೆ ಈ ಜೋಡಿ ಯಾವುದೇ ಮಾಹಿತಿ ಬಹಿರಂಗಪಡಿಸದಿದ್ದರೂ ಅವರು ಫೆ. 26 ರಂದು ಉದಯಪುರ ಹೊರ ವಲಯದಲ್ಲಿರುವ ಬೆಟ್ಟದ ಮೇಲಿನ ಐಟಿಸಿ ಸಂಸ್ಥೆಯ ದಿ ಮೆಮೆಂಟೋಸ್‌ನಲ್ಲಿ ನಡೆಯಲಿದೆ ಎನ್ನುವ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದೆ.
ತಮ್ಮ ಮದುವೆಗೆ ಹೆಚ್ಚಿನ ಗೌಪ್ಯತೆ ಕಾಪಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಈ ಜೋಡಿ ಬೆಟ್ಟದ ರೆಸಾರ್ಟ್ ಅನ್ನು ಆಯ್ಕೆ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಇದರ ಜೊತೆಗೆ ಇತರ ಸಂಭಾವ್ಯ ಸ್ಥಳಗಳಲ್ಲಿ ರಾಫೆಲ್ಸ್ ಉದಯಪುರ ಮತ್ತು ಫೇರ್‌ಮಾಂಟ್ ರೇಸಾರ್ಟ್‌ಲ್ಲಿ ಮದುವೆ ನಡೆದರೂ ಅಚ್ಚರಿಪಡುವಂತಿಲ್ಲ ಎನ್ನಲಾಗಿದೆ.ಫೆಬ್ರವರಿ 26 ರಂದು ರಶ್ಮಿಕಾ ಮಂದಣ್ಣ ಜೊತೆ ಮದುವೆಗೆ ಮುನ್ನ ವಿಜಯ್ ದೇವರಕೊಂಡ ಅವರ ತಾಯಿಯ ಹುಟ್ಟುಹಬ್ಬದಂದು ಅವರ ಪಾದಗಳನ್ನು ತೊಳೆದು ಆರ್ಶೀವಾದ ಪಡೆದರು ಎಂದು ಅವರ ಸೋದರಳಿಯ ಹೇಳುತ್ತಾರೆ .ಹೆಲಿಪ್ಯಾಡ್ ಹೊಂದಿರುವ ಹೋಟೆಲ್‌ನಲ್ಲಿ ಇಳಿಯಲು ಹೆಲಿಕಾಪ್ಟರ್ ಸೇವೆಯನ್ನು ಸಹ ಬಳಸಬಹುದು ಎಂದು ಮೂಲಗಳು ಹೇಳುತ್ತವೆ.
ಅಲ್ಟಾ-ಐಷಾರಾಮಿ ಹೋಟೆಲ್ 117 ಸೂಟ್‌ಗಳು ಮತ್ತು ವಿಲ್ಲಾಗಳನ್ನು ಹೊಂದಿದೆ.ಇದು ಬೆಟ್ಟದ ತುದಿಯಲ್ಲಿದ್ದು, ಅರವಳ್ಳಿ ಶ್ರೇಣಿಯ ಸುಂದರ ನೋಟಗಳು ಮತ್ತು ಕೆಳಗೆ ಮಾನವ ನಿರ್ಮಿತ ಸರೋವರವಿದೆ. ಇದು ಐದು ರೆಸ್ಟೋರೆಂಟ್‌ ಗಳು ಮತ್ತು ಮೂರು ಔತಣಕೂಟಗಳು ಮತ್ತು ಗೊತ್ತುಪಡಿಸಿದ ಆಚರಣೆಯ ಸ್ಥಳಗಳನ್ನು ಒಳಗೊಂಡಿದೆ.
ಫೆಬ್ರವರಿ 24 ಮತ್ತು 25 ರಂದು ನಡೆಯಲಿರುವ ವಿವಾಹ ಪೂರ್ವ ಕಾರ್ಯಕ್ರಮಗಳಿಗೆ 23 ರ ವೇಳೆಗೆ ಅತಿಥಿಗಳು ಆಗಮಿಸುವ ನಿರೀಕ್ಷೆಯಿದೆ. ಮದುವೆಗೆ ಮುನ್ನ ವಿಜಯ್ ಮತ್ತು ರಶ್ಮಿಕಾ ಮುಂಬೈ ವಿಮಾನ ನಿಲ್ದಾಣದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಕಳೆದ ವರ್ಷ ವಿಜಯ್ ಮತ್ತು ರಶ್ಮಿಕಾ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಮಾಲೀನ್ಸ್ ನಲ್ಲಿ ರಜೆ ಕಳೆದ ನಂತರ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಜನವರಿ 2023 ರಲ್ಲಿ ಪ್ರಾರಂಭವಾದವು. ಕಳೆದ ಮೂರು ವರ್ಷಗಳಲ್ಲಿ ಅವರು ಹಲವಾರು ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ರಶ್ಮಿಕಾ ಮತ್ತು ವಿಜಯ್ ಮೊದಲು ಗೀತಾ ಗೋವಿಂದಂ (2018) ಚಿತ್ರೀಕರಣದ ಸಮಯದಲ್ಲಿ ಭೇಟಿಯಾದರು ಮತ್ತು ನಂತರ ಡಿಯರ್ ಕಾಮೇಡ್ (2019) ನಲ್ಲಿ ಒಟ್ಟಿಗೆ ಕೆಲಸ ಮಾಡಿದರು.ಮುಂಬೈ, ಫೆ.19- ಕನ್ನಡತಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಜೋಡಿ ಫೆ. 26 ರಂದು ಉದಯಪುರದಲ್ಲಿ ವಿವಾಹವಾಗಲಿದ್ದಾರೆ ಎಂದು ವರದಿಯಾಗಿದೆ. ಮದುವೆ ಬಗ್ಗೆ ಈ ಜೋಡಿ ಯಾವುದೇ ಮಾಹಿತಿ ಬಹಿರಂಗಪಡಿಸದಿದ್ದರೂ ಅವರು ಫೆ. 26 ರಂದು ಉದಯಪುರ ಹೊರ ವಲಯದಲ್ಲಿರುವ ಬೆಟ್ಟದ ಮೇಲಿನ ಐಟಿಸಿ ಸಂಸ್ಥೆಯ ದಿ ಮೆಮೆಂಟೋಸ್‌ನಲ್ಲಿ ನಡೆಯಲಿದೆ ಎನ್ನುವ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.