2026-03-07 01:42:14

India threatens Pakistan with a single photo | ಒಂದೇ ಫೋಟೋ ಮೂಲಕ ಪಾಕಿಸ್ತಾನವನ್ನು ಬೆದರಿಸಿದ ಭಾರತ | Speed News Kannada

India threatens Pakistan with a single photo | ಒಂದೇ ಫೋಟೋ ಮೂಲಕ ಪಾಕಿಸ್ತಾನವನ್ನು ಬೆದರಿಸಿದ ಭಾರತ | Speed News Kannada

ಹರಿಯಾಣದ ಚಂಡಿಮಂದಿರ್‌ನಲ್ಲಿರುವ ಭಾರತೀಯ ಸೇನೆಯ ಪಶ್ಚಿಮ ಕಮಾಂಡ್ ಪ್ರಧಾನ ಕಚೇರಿಗೆ ಅಮೆರಿಕದ ಉನ್ನತ ಮಟ್ಟದ ನಿಯೋಗ ಭೇಟಿ ನೀಡಿದ್ದು ದಕ್ಷಿಣ ಏಷ್ಯಾದ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಪಾಕಿಸ್ತಾನ ಗಡಿಯ ಸಮೀಪದಲ್ಲಿರುವ ಈ ಕಮಾಂಡ್‌ ಗೆ ಅಮೆರಿಕದ ಉನ್ನತ ಅಧಿಕಾರಿಗಳ ಭೇಟಿ ಕಾರ್ಯತಂತ್ರದ ದೃಷ್ಟಿಯಿಂದ ಮಹತ್ವ ಪಡೆದಿದೆ.
ಫೆಬ್ರವರಿ 16ರಂದು ಅಮೆರಿಕದ ರಾಯಭಾರಿ ಸೆರ್ಗಿಯೋ ಗೋರ್ ಹಾಗೂ ಯುಎಸ್ ಇಂಡೋ-ಪೆಸಿಫಿಕ್ ಕಮಾಂಡ್ ಕಮಾಂಡರ್ ಸ್ಯಾಮ್ಯುಯೆಲ್ ಜೆ. ಪಾಪರೊ ಚಂಡಿಮಂದಿರ್ ಪ್ರಧಾನ ಕಚೇರಿಗೆ ಭೇಟಿ ನೀಡಿದರು. ಅವರನ್ನು ಪಶ್ಚಿಮ ಕಮಾಂಡ್‌ ಜಿಒಸಿ-ಇನ್-ಚೀಫ್ ಮನೋಜ್ ಕುಮಾರ್ ಕಟಿಯಾರ್ ಸ್ವಾಗತಿಸಿದರು. ಈ ಭೇಟಿ ಭಾರತ-ಅಮೆರಿಕ ರಕ್ಷಣಾ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಿದಂತೆ ಕಾಣಿಸಿದೆ.
ಪಶ್ಚಿಮ ಕಮಾಂಡ್ ಭಾರತೀಯ ಸೇನೆಯ ಪ್ರಮುಖ ಕಾರ್ಯಾಚರಣಾ ಘಟಕಗಳಲ್ಲಿ ಒಂದಾಗಿದ್ದು, ಇದು ಭಾರತ-ಪಾಕಿಸ್ತಾನ ಗಡಿಯ ಹೆಚ್ಚಿನ ಭಾಗದ ಭದ್ರತೆಗೆ ಹೊಣೆಗಾರವಾಗಿದೆ. ಈ ಕಮಾಂಡ್‌ ಸನ್ನದ್ಧತೆ, ಕಾರ್ಯಾಚರಣಾ ಅನುಭವ ಮತ್ತು ಭದ್ರತಾ ಸವಾಲುಗಳ ಕುರಿತು ಅಮೆರಿಕದ ನಿಯೋಗಕ್ಕೆ ವಿವರಿಸಲಾಗಿದೆ.2025ರಲ್ಲಿ ನಡೆದ ಆಪರೇಷನ್ ಸಿಂದ್ ಕುರಿತು ಸಹ ಚರ್ಚೆ ನಡೆದಿರುವುದು ಗಮನಾರ್ಹ. ಈ ಕಾರ್ಯಾಚರಣೆಯಲ್ಲಿ ಪಶ್ಚಿಮ ಕಮಾಂಡ್ ಪ್ರಮುಖ ಪಾತ್ರ ವಹಿಸಿತ್ತು. ಸೀಮಿತ ಸಾಂಪ್ರದಾಯಿಕ ಕಾರ್ಯಾಚರಣೆಗಳನ್ನು ನಡೆಸುವ ಭಾರತದ ಸಾಮರ್ಥ್ಯವನ್ನು ಇದು ತೋರಿಸಿಕೊಟ್ಟಿತು ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.
ಈ ಬೆಳವಣಿಗೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರಿಗೆ ಆತಂಕ ಉಂಟುಮಾಡಿದೆ ಎಂಬ ವಿಶ್ಲೇಷಣೆ ವ್ಯಕ್ತವಾಗುತ್ತಿದೆ. ಅಮೆರಿಕದ ಇಂಡೋ-ಪೆಸಿಫಿಕ್ ತಂತ್ರಯೋಜನೆಯಲ್ಲಿ ಭಾರತದ ಕೇಂದ್ರಸ್ಥಾನ ಮತ್ತಷ್ಟು ಬಲವಾಗುತ್ತಿರುವ ಸೂಚನೆ ಇದಾಗಿದೆ.ಇದೇ ವೇಳೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಪೀಟ್ ಹೆಗ್ರೆತ್ ಸಹಿ ಮಾಡಿದ 10 ವರ್ಷಗಳ ರಕ್ಷಣಾ ಚೌಕಟ್ಟು ಒಪ್ಪಂದವು ದೀರ್ಘಕಾಲೀನ ಸಹಕಾರಕ್ಕೆ ದಾರಿ ಮಾಡಿಕೊಟ್ಟಿದೆ. ಈ ಎಲ್ಲ ಬೆಳವಣಿಗೆಗಳು ಭಾರತ-ಅಮೆರಿಕ ಬಾಂಧವ್ಯ ಬಲವಾಗುತ್ತಿರುವುದನ್ನು ಸ್ಪಷ್ಟಪಡಿಸುತ್ತವೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.