ದೆಹಲಿ : ಕೇಂದ್ರ ಬಜೆಟ್ ದುರ್ಬಲ ಮತ್ತು ಹಿಂದುಳಿದವರನ್ನ ಸಬಲೀಕರಣಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಫೆಬ್ರವರಿ 1 ರಂದು ಇಂದು ಸಂಸತ್ತಿನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026-27ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ತಮ್ಮ ಬಜೆಟ್ ಭಾಷಣವನ್ನು ಓದಲು ಪ್ರಾರಂಭಿಸಲಿದ್ದಾರೆ. 2024 ರಲ್ಲಿ ಎನ್ಡಿಎ ಸರ್ಕಾರ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಇದು ಎರಡನೇ ಪೂರ್ಣ ಬಜೆಟ್ ಆಗಿರುತ್ತದೆ.
ಇದರೊಂದಿಗೆ, ನಿರ್ಮಲಾ ಸೀತಾರಾಮನ್ ಸತತ ಒಂಬತ್ತನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ದೇಶದ ಮೊದಲ ಮಹಿಳಾ ಹಣಕಾಸು ಸಚಿವೆಯಾಗಲಿದ್ದಾರೆ. 2026 ರ ಕೇಂದ್ರ ಬಜೆಟ್ ಬಗ್ಗೆ ಸಮಾಜದ ಎಲ್ಲಾ ವರ್ಗಗಳಲ್ಲಿ ಸಾಕಷ್ಟು ಉತ್ಸಾಹ ಮತ್ತು ನಿರೀಕ್ಷೆ ಇದೆ. ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭಾನುವಾರ ಕೇಂದ್ರ ಬಜೆಟ್ 2026-27 ಅನ್ನು ಭಾರತವನ್ನು ‘ವಿಕಸಿತ್ ಭಾರತ’ ಮಾಡುವತ್ತ ಒಂದು ಹೆಜ್ಜೆ ಎಂದು ಬಣ್ಣಿಸಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಸತ್ತಿನಲ್ಲಿ ತಮ್ಮ ಸತತ ಒಂಬತ್ತನೇ ಬಜೆಟ್ ಮಂಡಿಸಲಿದ್ದಾರೆ. ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಶೇಖಾವತ್, ‘ನಂಬಿಕೆ ಇರಲಿ. ಕಳೆದ 11 ವರ್ಷಗಳಿಂದ, ಭಾರತವನ್ನು ವಿಕಸಿತ್ ಭಾರತವನ್ನಾಗಿ ಮಾಡುವುದು ಸರ್ಕಾರದ ಗುರಿಯಾಗಿದೆ. ಪ್ರತಿಯೊಂದು ಬಜೆಟ್ ಈ ಗುರಿಯತ್ತ ಒಂದು ಹೆಜ್ಜೆಯಾಗಿದೆ. ಈ ಬಜೆಟ್ ಭಾರತವನ್ನು ಉತ್ತುಂಗಕ್ಕೆ ಕೊಂಡೊಯ್ಯುವತ್ತ ಮತ್ತೊಂದು ಹೆಜ್ಜೆಯಾಗಲಿದೆ’ ಎಂದು ಹೇಳಿದರು.