2026-03-07 05:17:19

Minister Kumaraswamy MLA Uday accuses him of putting his elder brothers son in jail | ಅಣ್ಣನ ಮಗನನ್ನೇ ಜೈಲಿಗೆ ಹಾಕಿಸಿದ್ದು ಸಚಿವ ಕುಮಾರಸ್ವಾಮಿ ಶಾಸಕ ಉದಯ್‌ ಆರೋಪ | Speed News Kannada

Minister Kumaraswamy MLA Uday accuses him of putting his elder brothers son in jail | ಅಣ್ಣನ ಮಗನನ್ನೇ ಜೈಲಿಗೆ ಹಾಕಿಸಿದ್ದು ಸಚಿವ ಕುಮಾರಸ್ವಾಮಿ ಶಾಸಕ ಉದಯ್‌ ಆರೋಪ | Speed News Kannada

ಮಂಡ್ಯ: ಮಾಜಿ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಅವರು ಜೈಲು ಸೇರಲು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರೇ ಕಾರಣ ಎಂದು ಕಾಂಗ್ರೆಸ್ ಶಾಸಕ ಕದಲೂರು ಉದಯ್ ಗಂಭೀರ ಆರೋಪ ಮಾಡಿದ್ದಾರೆ. 
ಕುಮಾರಸ್ವಾಮಿ ಅವರು ಸ್ವಂತ ಅಣ್ಣನ ಮಗನನ್ನೇ ಸಹಿಸಿಕೊಳ್ಳಲಿಲ್ಲ, ಇನ್ನು ನಮ್ಮನ್ನು ಸಹಿಸಿಕೊಳ್ತಾರಾ? ಇವರ ಮಗ ಗೆದ್ದಿಲ್ಲ ಅಂತಾ ಷಡ್ಯಂತ್ರ ಮಾಡಿ ಅಣ್ಣನ ಮಗನನ್ನೇ ಜೈಲಿಗೆ ಹಾಕಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಲೋಕಸಭಾ ಸದಸ್ಯನಾದ ಕೆಲವೇ ಗಂಟೆಗಳಲ್ಲಿ ಮೇಕೆದಾಟು ಯೋಜನೆಗೆ ಅನುಮೋದನೆ ತರುತ್ತೇನೆ ಎದು ಭರವೆ ನೀಡಿದ್ದರು. ಇದುವರೆಗೂ ಆಗಿಲ್ಲ. ಬಸ್‌ ನಿಲ್ದಾಣ ಬಸ್‌ ಶೆಲ್ಟರ್‌ ಮಾಡಿಸಿದ್ದೇ ಇವರ ಸಾಧನೆ ಎಂದು ಉದಯ್‌ ವ್ಯಂಗ್ಯವಾಡಿದರು.
ಕುಮಾರಸ್ವಾಮಿ ಅವರು ಮಂಡ್ಯಕ್ಕೆ ಕೈಗಾರಿಕೆ ತರುವುದಾದರೆ ನಾನೇ 60-70 ಎಕರೆ ಜಮೀನು ಕೊಡುವೆ.ಡ್ತೀನಿ. ಆದರೆ ಮೊದಲು ಯಾವ ಕೈಗಾರಿಕೆ ತರುತ್ತೇನೆ ಎಂದು ಅವರು ಹೇಳಬೇಕು. ಅಭಿವೃದ್ಧಿ ಮಾಡಲು ಛಲ, ಆಸಕ್ತಿ ಇರಬೇಕು. ರೈತರ ಕಷ್ಟ ತಿಳಿದಿರಬೇಕು. ಕೇವಲ ಭಾವನಾತ್ಮಕ ಭಾಷಣ ಮಾಡಿಕೊಂಡು ಕಾಲಹರಣ ಮಾಡಿದರೆ ಆಗುವುದಿಲ್ಲ ಎಂದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.