ಮಂಡ್ಯ: ಮಾಜಿ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಅವರು ಜೈಲು ಸೇರಲು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರೇ ಕಾರಣ ಎಂದು ಕಾಂಗ್ರೆಸ್ ಶಾಸಕ ಕದಲೂರು ಉದಯ್ ಗಂಭೀರ ಆರೋಪ ಮಾಡಿದ್ದಾರೆ.
ಕುಮಾರಸ್ವಾಮಿ ಅವರು ಸ್ವಂತ ಅಣ್ಣನ ಮಗನನ್ನೇ ಸಹಿಸಿಕೊಳ್ಳಲಿಲ್ಲ, ಇನ್ನು ನಮ್ಮನ್ನು ಸಹಿಸಿಕೊಳ್ತಾರಾ? ಇವರ ಮಗ ಗೆದ್ದಿಲ್ಲ ಅಂತಾ ಷಡ್ಯಂತ್ರ ಮಾಡಿ ಅಣ್ಣನ ಮಗನನ್ನೇ ಜೈಲಿಗೆ ಹಾಕಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಲೋಕಸಭಾ ಸದಸ್ಯನಾದ ಕೆಲವೇ ಗಂಟೆಗಳಲ್ಲಿ ಮೇಕೆದಾಟು ಯೋಜನೆಗೆ ಅನುಮೋದನೆ ತರುತ್ತೇನೆ ಎದು ಭರವೆ ನೀಡಿದ್ದರು. ಇದುವರೆಗೂ ಆಗಿಲ್ಲ. ಬಸ್ ನಿಲ್ದಾಣ ಬಸ್ ಶೆಲ್ಟರ್ ಮಾಡಿಸಿದ್ದೇ ಇವರ ಸಾಧನೆ ಎಂದು ಉದಯ್ ವ್ಯಂಗ್ಯವಾಡಿದರು.
ಕುಮಾರಸ್ವಾಮಿ ಅವರು ಮಂಡ್ಯಕ್ಕೆ ಕೈಗಾರಿಕೆ ತರುವುದಾದರೆ ನಾನೇ 60-70 ಎಕರೆ ಜಮೀನು ಕೊಡುವೆ.ಡ್ತೀನಿ. ಆದರೆ ಮೊದಲು ಯಾವ ಕೈಗಾರಿಕೆ ತರುತ್ತೇನೆ ಎಂದು ಅವರು ಹೇಳಬೇಕು. ಅಭಿವೃದ್ಧಿ ಮಾಡಲು ಛಲ, ಆಸಕ್ತಿ ಇರಬೇಕು. ರೈತರ ಕಷ್ಟ ತಿಳಿದಿರಬೇಕು. ಕೇವಲ ಭಾವನಾತ್ಮಕ ಭಾಷಣ ಮಾಡಿಕೊಂಡು ಕಾಲಹರಣ ಮಾಡಿದರೆ ಆಗುವುದಿಲ್ಲ ಎಂದರು.