2026-07-23 04:26:21

ACTOR KISHORE | ವಿದ್ಯಾರ್ಥಿಗಳ ಮೇಲೆ ಲಾಟಿ ಚಾರ್ಜ್ ದೌರ್ಜನ್ಯ ಪ್ರಧಾನಿ ಮೋದಿ ವಿರುದ್ಧ ನಟ ಕಿಶೋರ್ ತೀವ್ರ ಆಕ್ರೋಶ | SNK

ACTOR KISHORE | ವಿದ್ಯಾರ್ಥಿಗಳ ಮೇಲೆ ಲಾಟಿ ಚಾರ್ಜ್ ದೌರ್ಜನ್ಯ ಪ್ರಧಾನಿ ಮೋದಿ ವಿರುದ್ಧ ನಟ ಕಿಶೋರ್ ತೀವ್ರ ಆಕ್ರೋಶ | SNK

ಬೆಂಗಳೂರು: ದೆಹಲಿಯ ಘಟನೆಗಳ ಕುರಿತು ಮಾತನಾಡಿರುವ ನಟ ಕಿಶೋರ್, ಇಲ್ಲಿಯವರೆಗೆ ಶಾಂತಿ ಮತ್ತು ಸಹನೆಯಿಂದ ಹೋರಾಡಿದ ನಮ್ಮ ದೇಶದ ಯುವ ಪ್ರತಿಭಟನಾಕಾರರಿಗೆ ನನ್ನ ಮೊದಲ ಸಲ್ಯೂಟ್ ಎಂದು ಹೇಳಿದ್ದಾರೆ. ಪ್ರೀತಿ, ಶಾಂತಿ, ಐಕ್ಯತೆ ಮತ್ತು ಅಹಿಂಸೆಯನ್ನು ಎತ್ತಿಹಿಡಿದು, ಪೆಟ್ಟು ತಿಂದರೂ ಮರುಪೆಟ್ಟು ನೀಡದೆ ನಿಂತಿರುವ ಇಂತಹ ಅಹಿಂಸಾತ್ಮಕ ಹೋರಾಟಗಾರರಿಗಿಂತ ಧೈರ್ಯಶಾಲಿ ಪಡೆ ಪ್ರಪಂಚದಲ್ಲೇ ಬೇರೊಂದಿಲ್ಲ.

ಆದರೆ, ಯಾವುದೇ ಪ್ರತಿರೋಧ ತೋರದ ಈ ಮಕ್ಕಳ ಮೇಲೆ ಪೊಲೀಸ್ ಹಾಗೂ ಆರ್‌ಎಸ್‌ಎಸ್ ಗೂಂಡಾಗಳು ನೈಲ್-ಲಾಠಿಗಳಿಂದ ನಡೆಸಿರುವ ಕ್ರೂರ ದಾಳಿ ಸಂಪೂರ್ಣ ಅಮಾನವೀಯ ಎಂದು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಈ ವಿಚಾರದಲ್ಲಿ ಪ್ರಧಾನಿ ಮೋದಿಯವರಲ್ಲಿ ಕನಿಷ್ಠ ಮಾನವೀಯತೆಯೂ ಇಲ್ಲದಂತಾಗಿದೆ; ಕಳೆದ ಎರಡು ತಿಂಗಳಿಂದ ದೌರ್ಜನ್ಯಕ್ಕೊಳಗಾಗಿ ಪ್ರಾಣ ಕಳೆದುಕೊಂಡ ಮಕ್ಕಳ ಕುಟುಂಬಕ್ಕೆ ಸಾಂತ್ವನ ಹೇಳಲು ಅವರ ಬಳಿ ಒಂದು ಪದವೂ ಇಲ್ಲ. ಗಾಂಧೀಜಿಯವರ ಹತ್ಯೆಯಿಂದ ಹಿಡಿದು ಗೋಧ್ರಾ ಮತ್ತು ಕೊವ್ವೂರ್ ಘಟನೆಗಳವರೆಗೆ ಹಿಂಸೆ, ದ್ವೇಷ ಹಾಗೂ ಸುಳ್ಳುಗಳನ್ನು ಸೃಷ್ಟಿಸುವುದೇ ಇವರುಗಳ ಇತಿಹಾಸವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ .

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.