2026-07-23 07:38:08

A Major Disaster Was Narrowly Avoided in Bangalore Airport | ಬೆಂಗಳೂರು ಏರ್ ಪೋರ್ಟ್ ನಲ್ಲಿ ರನ್ ವೇಗೆ ಹಾರಿ ಬಂದ ಬೃಹತ್ ಜಾಹೀರಾತು ಬಲೂನು: ಸ್ವಲ್ಪದರಲ್ಲಿ ತಪ್ಪಿದ ಭಾರಿ ಅನಾಹುತ! | Speed News Kannada

A Major Disaster Was Narrowly Avoided in Bangalore Airport | ಬೆಂಗಳೂರು ಏರ್ ಪೋರ್ಟ್ ನಲ್ಲಿ ರನ್ ವೇಗೆ ಹಾರಿ ಬಂದ ಬೃಹತ್ ಜಾಹೀರಾತು ಬಲೂನು: ಸ್ವಲ್ಪದರಲ್ಲಿ ತಪ್ಪಿದ ಭಾರಿ ಅನಾಹುತ! | Speed News Kannada

ಬೆಂಗಳೂರು: ಕೆಲ ದಿನಗಳ ಹಿಂದೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ ವೇಗೆ ನಾಯಿ ನುಗ್ಗಿ ಅವಾಂತರ ಸೃಷ್ಟಿ ಮಾಡಿತ್ತು ಭದ್ರತಾ ಲೋಪದ ಬಗ್ಗೆ ವರದಿಯಾಗಿತ್ತು. ಇದೀಗ ಜಾಹಿರಾತಿನ ಬೃಹತ್ ಬಲೂನ್ ಒಂದು ರನ್ ವೇಗೆ ಹಾರಿ ಬಂದು ಬಿದ್ದಿರುವ ಘಟನೆ ನಡೆದಿದೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ ವೇಕೆ ಏಕಾಏಕಿ ಬೃಹತ್ ಬಲೂನ್ ಒಂದು ಹಾರಿ ಬಂದಿದೆ. ಈ ಸಂದರ್ಭದಲ್ಲಿ ವಿಮಾನ ಹಾರಾಟವಿರಲಿಲ್ಲವಾದ್ದರಿಂದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. ಬಿಸಿಡಿ ಕನ್ಸ್ ಸ್ಟ್ರಕ್ಷನ್ ಎಂಬ ಕಂಪನಿಗೆ ಸೇರಿದ ಬೃಹತ್ ಜಾಹೀರಾತು ಬಲೂನ್ ಇದಾಗಿದ್ದು, ದಾರಾ ಕಟ್ ಆಗಿದ್ದರಿಂದ ಗಾಳಿಯಲ್ಲಿ ಹಾರುತ್ತಾ ಬಂದು ರನ್ ವೇಗೆ ಬಂದಿದೆ. ಬಳಿಕ ಭದ್ರತಾ ಸಿಬ್ಬಂದಿಗಳು ಬಲೂನ್ ತೆರವು ಗೊಳಿಸಿದ್ದಾರೆ. ರನ್ ವೇಗೆ ಬಲೂನ್ ಹಾರಿ ಬಂದ ಬಗ್ಗೆ ಏರ್ ಪೋರ್ಟ್ ಸಿಬ್ಬಂದಿ ಏರ್ ಪೋರ್ಟ್ ಠಾಣೆಯಲ್ಲಿ ಬಿಸಿಡಿ ಕಂಪನಿ ವಿರುದ್ಧ ದೂರು ದಾಖಲಿಸಿದ್ದು, ಪ್ರಕರಣ ದಾಖಲಾಗಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.