ಮಂಡ್ಯ : ನೆನ್ನೆ ಮಳವಳ್ಳಿ ತಾಲೂಕಿನ ಮುತ್ತತ್ತಿ ಬಳಿಯ ಕಾವೇರಿ ನದಿಯಲ್ಲಿ ಘೋರ ದುರಂತ ಸಂಭವಿಸಿದೆ. ನದಿಯಲ್ಲಿ ಸ್ನಾನಕ್ಕೆ ಇಳಿದು ಆಟವಾಡ್ತಿದ್ದ ಒಂದೇ ಕುಟುಂಬದ ಐವರು ಜಲಸಮಾಧಿಯಾಗಿದ್ದು, ಮೃತರ ಕೊನೆ ಕ್ಷಣದ ವಿಡಿಯೋ ಇದೀಗ ಲಭ್ಯವಾಗಿದೆ.
ಆ ವಿಡಿಯೋದಲ್ಲಿ ಕುಟುಂಬ ಸದಸ್ಯ ನೋರ್ವ ಆಟವಾಡ್ತಿದ್ದ ನಾಲ್ವರಿಗೆ ತಮಾಷೆಗೆಂದು ಹ್ಯಾಪಿ ಜರ್ನಿ ಎಂದು ಹೇಳಿದ್ದಾರೆ. ವಿಪರ್ಯಾಸ ಎಂದರೆ ಅದೇ ಅವರ ಕೊನೆಯ ಹ್ಯಾಪಿ ಕ್ಷಣವಾಗಿದ್ದು ಮುಂದೆ ಅದು ಅವರ ಬದುಕಿಗೆ ಶ್ಯಾಡ್ ಜರ್ನಿ ಆಗಿದ್ದು ವಿಧಿಯ ವಿಪರ್ಯಾಸವೇ ಸರಿ.