ಬೆಂಗಳೂರಿನಲ್ಲಿ ಮಧ್ಯಪ್ರಾಚ್ಯ ಯುದ್ಧದಿಂದಾಗಿ ಆಟೋ ಎಲ್ಪಿಜಿ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗುತ್ತಿದೆ. ಆಟೋ ಚಾಲಕರಿಗೆ ಗ್ಯಾಸ್ ಸಿಗದೇ ದಿನಲೂ ಬಂಕ್ ಮುಂದೆ ಪರದಾಡುತ್ತಾ ಇದ್ದಾರೆ ಹಗಲು ರಾತ್ರಿ ಎನ್ನದೇ ಬಂಕ್ಗಳ ಮುಂದೆ ಚಾಲಕರು ಕಾಯುತ್ತಾ ಕುಳಿತ್ತಿದ್ದಾರೆ. ಆಟೋ ಚಾಲಕರ ಸಮಸ್ಯೆ ಕುರಿತು ಸರ್ಕಾರದ ವಿರುದ್ಧ ಇದೀಗ ವಾಟಾಳ್ ನಾಗರಾಜ್ ಪ್ರತಿಭಟನೆಗೆ ಇಳಿದಿದ್ದಾರೆ. ಆಟೋ ಎಲ್ಪಿಜಿ ಅಭಾವದ ಕುರಿತು ಗುರುವಾರ ಕರಾಳ ದಿನಾಚರಣೆ ಮಾಡಲು ವಾಟಲ್ ನಾಗರಾಜ್ ಕರೆ ನೀಡಿದ್ದಾರೆ. ಗುರುವಾರ ಸಂಪೂರ್ಣ ಆಟೋ ಬಂದ್ ಕರೆ ನೀಡಿದ್ದು. ಕರ್ನಾಟಕ ಬಂದ್ಗೂ ಕರೆ ನೀಡಿದ್ದಾರೆ. ಗುರುವಾರ ಆಟೋದಲ್ಲಿ ಕಪ್ಪು ಬಾವುಟ ಹಿಡಿದು ಪ್ರತಿಭಟನೆ ನಡೆಸಲು ಕನ್ನಡಪರ ಹೋರಟಗಾರ ವಾಟಾಳ್ ನಾಗರಾಜ್ ಮುಂದಾಗಿದ್ದಾರೆ.