2026-06-25 04:03:11

Thief Complaint Against the Family He Attempted To Steal From!| ಕದಿಯಲು ಹೋಗಿ ಸಿಕ್ಕಿಬಿದ್ದವನಿಂದ ತಾನು ಕಳ್ಳತನಕ್ಕೆ ಯತ್ನಿಸಿದ ಮನೆಯವರ ವಿರುದ್ಧವೇ ದೂರು! | Speed News Kannada

Thief Complaint Against the Family He Attempted To Steal From!| ಕದಿಯಲು ಹೋಗಿ ಸಿಕ್ಕಿಬಿದ್ದವನಿಂದ ತಾನು ಕಳ್ಳತನಕ್ಕೆ ಯತ್ನಿಸಿದ ಮನೆಯವರ ವಿರುದ್ಧವೇ ದೂರು! | Speed News Kannada

ಬೆಂಗಳೂರು, ಫೆಬ್ರವರಿ 05: ಕಳ್ಳತನ ಮಾಡಲು ಹೋದಾಗ ಅವರನ್ನು ಯಾರಾದ್ರೂ ನೋಡಿದ್ರೆ ಅವರ ಮೇಲೆಯೇ ಈ ಖದೀಮರು ಹಲ್ಲೆ ನಡೆಸಿ ಎಸ್ಕೆಪ್ ಆಗೋದನ್ನು ನಾವು ನೋಡಿದ್ದೇವೆ. ಇಲ್ಲವೇ ಸಿಕ್ಕಿಬಿದ್ದು ಜೈಲು ಸೇರಿರುವವರ ಕತೆ ಕೇಳಿದ್ದೇವೆ. ಆದರೆ ಸಿಲಿಕಾನ್ ಸಿಟಿ ಬೆಂಗಳೂರಲ್ಲೊಂದು ವಿಚಿತ್ರ ಪ್ರಕರಣ ನಡೆದಿದೆ. ಫಸ್ಟ್ ಟೈಂ ಕಳ್ಳತನಕ್ಕೆ ಹೋದ ವ್ಯಕ್ತಿಯೊಬ್ಬ ಮನೆಯವರ ಬಳಿ ಸಿಕ್ಕಿಬಿದ್ದು ಪೆಟ್ಟು ತಿಂದು ಬಂದಿದ್ದಾನೆ. ಸಾಲದಕ್ಕೆ ಕದಿಯಲು ಹೋದ ವೇಳೆ ಆ ಮನೆಯವರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾನೆ.
ಹೌದು, ಆಟೋ ಓಡಿಸಿಕೊಂಡು ಜೀವನ ಮಾಡ್ತಿದ್ದ ಅಸ್ಕರ್ ಖಾನ್ ಎಂಬಾತ ಕೆಟ್ಟ ಚಟಗಳಿಗೆ ದಾಸನಾಗಿದ್ದ. ಹೀಗಾಗಿ ದುಡಿಯುವ ಹಣ ಈತನ ಖರ್ಚಿಗೆ ಸಾಕಾಗುತ್ತಿರಲಿಲ್ಲ. ಮತ್ತೊಂದೆಡೆ ಈತನ ಖದೀಮ ಸ್ನೇಹಿತರು ಕಳ್ಳತನ ಮಾಡಿ ಖರ್ಚಿಗೆ ದುಡ್ಡು ಮಾಡಿಕೊಳ್ಳುತ್ತಿದ್ದರು.
ಇವರಿಂದಾಗಿ ಪ್ರೇರಿತನಾಗಿದ್ದ ಅಸ್ಕರ್ ತಾನೂ ಕಳ್ಳತನ ಮಾಡಿ ಹಣ ಮಾಡಬೇಕೆಂದು ನಿರ್ಧರಿಸಿದ್ದ. ಅದರಂತೆ ತನ್ನ ಇಬ್ಬರು ಸ್ನೇಹಿತರ ಜೊತೆಗೂಡಿ ಚಿಕ್ಕನಹಳ್ಳಿಯ ಅಪಾರ್ಟೆಂಟ್ ಒಂದರಲ್ಲಿ ಕಬ್ಬಿಣ ಕದಿಯಲು ಕಾಂಪೌಂಟ್ ಹಾರಿದ್ದ. ಈ ವೇಳೆ ಇವರನ್ನು ಅಪಾರ್ಟ್‌ಮೆಂಟ್ ನಲ್ಲಿ ವಾಸವಿದ್ದ ದಂಪತಿ ಗಮನಿಸಿದ್ದು, ಪ್ರಶ್ನೆ ಮಾಡಿದ್ದಾರೆ. ಇದರಿಂದ ಸಿಟ್ಟಾದ ಅಸ್ಕರ್ ದಂಪತಿ ಮೇಲೆ ಹಲ್ಲೆ ಮಾಡಿದ್ದಾನೆ. ಜಗಳ ಜೋರಾಗಿದ್ದೇ ತಡ ಅಕ್ಕ ಪಕ್ಕದ ಮನೆಯವರೂ ಸ್ಥಳಕ್ಕೆ ಬಂದಿದ್ದಾರೆ. ಜನ ಸೇರುತ್ತಿರೋದನ್ನು ಕಂಡು ಅಸ್ಕರ್ ಆಟೋದಲ್ಲಿ ಸ್ನೇಹಿತರು ಎಸ್ಕೆಪ್ ಆಗಿದ್ದರೆ, ಇತ್ತ ಸಿಕ್ಕಿಬಿದ್ದ ಅಸ್ತರ್‌ಗೆ ಕಳ್ಳತನ ಮಾಡೋಕೆ ಬಂದಿದ್ಯಾ ಎಂದು ಸ್ಥಳೀಯರು ಮರದ ಪೀಸ್‌ನಿಂದ ಹಲ್ಲೆ ನಡೆಸಿದ್ದಾರೆ.ಅಲ್ಲಿಂದ ತಪ್ಪಿಸಕೊಂಡು ಬಂದ ಅಸ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾನೆ. ಕಳ್ಳತನ ಮಾಡುವಾಗ ಹಲ್ಲೆ ಮಾಡಿದ್ರು ಎಂದು ಕಂಪ್ಲೇಟ್ ನಲ್ಲಿ ಈತ ಉಲ್ಲೇಖಿಸಿದ್ದು, ಬಿಯರ್ ಬಾಟಲ್‌ನಿಂದ ಮಹಿಳೆ ಸೇರಿದಂತೆ ಇತರರ ಮೇಲೆ ತಾನು ಹಲ್ಲೆ ಮಾಡಿರುವುದನ್ನು ಕೂಡ ಒಪ್ಪಿಕೊಂಡಿದ್ದಾನೆ. ಸದ್ಯ ಅಸ್ತರ್‌ನನ್ನು ಅರೆಸ್ಟ್ ಮಾಡಿರುವ ಸಂಪಿಗೆಹಳ್ಳಿ ಪೊಲೀಸರು, ಈ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.