2026-06-25 02:26:10

The television actress who ended her boyfriends story to marry someone else | ಪ್ರೀತಿ ಮಾಯೆ ಹುಷಾರು ಬೇರೊಬ್ಬನನ್ನು ಮದುವೆಯಾಗಲು ಗೆಳೆಯನ ಕಥೆಯನ್ನೇ ಮುಗಿಸಿದ ಕಿರುತೆರೆ ನಟಿ | Speed News Kannada

The television actress who ended her boyfriends story to marry someone else | ಪ್ರೀತಿ ಮಾಯೆ ಹುಷಾರು ಬೇರೊಬ್ಬನನ್ನು ಮದುವೆಯಾಗಲು ಗೆಳೆಯನ ಕಥೆಯನ್ನೇ ಮುಗಿಸಿದ ಕಿರುತೆರೆ ನಟಿ | Speed News Kannada

ಬೆಂಗಳೂರು: ಬೆಂಗಳೂರಿನಲ್ಲಿ ಬೇರೊಬ್ಬ ವ್ಯಕ್ತಿಯನ್ನು ಮದುವೆಯಾಗಲು ಸಿದ್ಧತೆ ನಡೆಸುತ್ತಿದ್ದ ಟಿವಿ ನಟಿಯೊಬ್ಬರು ತನ್ನ ಲಿವ್-ಇನ್ ಗೆಳೆಯನನ್ನು ಕ್ರೂರವಾಗಿ ಕೊ*ಲೆ ಮಾಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ, ಘಟನೆ ಸುಮಾರು ಎರಡು ವಾರಗಳ ನಂತರ ಬೆಳಕಿಗೆ ಬಂದಿದೆ. ಪೊಲೀಸರ ಪ್ರಕಾರ, ಊರ್ಮಿಳಾ ಅಲಿಯಾಸ್ ಬಿಂದು ಎಂದು ಕರೆಯಲ್ಪಡುವ ಟಿವಿ ನಟಿ ಕಳೆದ ಕೆಲವು ದಿನಗಳಿಂದ ಮೋಹನ್ ಕೃಷ್ಣ ಎಂಬ ವ್ಯಕ್ತಿಯೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದರು. ಆದರೆ ಇತ್ತೀಚೆಗೆ ಅವರು ವಿನಯ್ ಎಂಬ ಲಾರಿ ಚಾಲಕನೊಂದಿಗೆ ಸಂಪರ್ಕಕ್ಕೆ ಬಂದು ಆತನನ್ನು ಮದುವೆಯಾಗಲು ನಿರ್ಧರಿಸಿದರು.
ಆದರೆ, ಮೋಹನ್ ಗೆ ಈ ವಿಷಯ ತಿಳಿದಾಗ, ಅವನು ಬಿಂದುವಿಗೆ ಪ್ರಶ್ನಿಸಿದ್ದಾನೆ.. ಮೋಹನ್ ತಮಗೆ ಅಡ್ಡಿಯಾಗಿದ್ದಾನೆಂದು ಭಾವಿಸಿದ ಬಿಂದು ಅವನ ಕಥೆಯನ್ನೇ ಮುಗಿಸಲು ನಿರ್ಧರಿಸಿದ್ದಳು.. ಪ್ಲಾನ್ ಮಾಡಿ ತನ್ನ ಮನೆಯಲ್ಲಿ ಮೋಹನ್ ಜೊತೆ ಪಾರ್ಟಿ ಅರೆಂಜ್ ಮಾಡಿ, ನಶೆಯಲ್ಲಿದ್ದ ಗೆಳೆಯನ ಮೇಲೆ ಹಲ್ಲೆ ಮಾಡಿಸಿದ್ದಾಳೆ.. ಮೂವರು ಸೇರಿ ಮೋಹನ್ ಮೇಲೆ ಚಾ*ಕುವಿನಿಂದ ಕ್ರೂರವಾಗಿ ಕೊ*ಲೆ ಮಾಡಿ, ಅಲ್ಲಿಂದ ಪರಾರಿಯಾಗಿದ್ದಾರೆ..
ಆದರೆ, ಕೊಲೆಯಾದ ಎರಡು ವಾರಗಳ ನಂತರ ಮನೆಯಲ್ಲಿ ಕೆಟ್ಟ ವಾಸನೆ ಬರುತ್ತಿದ್ದರಿಂದ ಸ್ಥಳೀಯರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ತಲುಪಿದ ಪೊಲೀಸರು ಮನೆಯೊಳಗೆ ಹೋಗಿ ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಮೋಹನ್ ಮೃತದೇಹ ಪತ್ತೆಯಾಗಿದೆ. ಪೊಲೀಸರು ಮೃತದೇಹವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಿದರು. ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಯಿತು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.