2026-04-23 04:57:13

Silent birds die from heatstroke | ಬಿಸಿಲಿನ ತಾಪಮಾನ ತಡೆಯಲಾಗದೇ ಪ್ರಾಣಬಿಟ್ಟ ಮೂಕ ಪಕ್ಷಿಗಳು | Speed news kannada

Silent birds die from heatstroke | ಬಿಸಿಲಿನ ತಾಪಮಾನ ತಡೆಯಲಾಗದೇ ಪ್ರಾಣಬಿಟ್ಟ ಮೂಕ ಪಕ್ಷಿಗಳು | Speed news kannada

ಈ ಬಾರಿ ರಾಜ್ಯದಲ್ಲಿ ತಾಪಮಾನ ಹೆಚ್ಚಾಗುತ್ತಿದೆ. ಕರ್ನಾಟಕದ ಹಲವು ಭಾಗಗಳಲ್ಲಿ ಸೂರ್ಯನ ತಾಪಮಾನ ಪ್ರಖರತೆ ಹೆಚ್ಚಾಗಿದ್ದು, ತುಮಕೂರಿನ ಜಿಲ್ಲೆಯಲ್ಲಿ ಕೇವಲ ಒಂದು ವಾರದ ಅವಧಿಯಲ್ಲಿ 32 ನವಿಲುಗಳ ಮಾರಣಹೋಮವಾಗಿದೆ. ಬೇಸಿಗೆ ಬಿಸಿಲಿನ ತಾಪಮಾನ ತಾಳಲಾರದೆ ಮೂಕ ಪಕ್ಷಿಗಳು ಪ್ರಾಣಬಿಟ್ಟಿವೆ.  ತುಮಕೂರಿನ ಊರ್ಡಿಗೆರೆ ಮತ್ತು ಗೂಳೂರು ಹೋಬಳಿಯಲ್ಲಿ ಮೂಕ ಪಕ್ಷಿಗಳ ಮಾರಣಹೋಮವಾಗಿದ್ದು. ಏಪ್ರಿಲ್ 16 ರಂದು ಒಂದೇ ದಿನ 11 ನವಿಲುಗಳು ಪ್ರಾಣ ಬಿಟ್ಟಿದ್ರೆ, ಏಪ್ರಿಲ್ 21 ರಂದು ಮತ್ತೆ 10 ನವಿಲುಗಳು ದಾರುಣವಾಗಿ ಸಾವನ್ನಪ್ಪಿದೆ. ಇನ್ನೂ ನವಿಲುಗಳ ಈ ಮಾರಣಹೋಮದಿಂದಾಗಿ ಜನ ಕಂಗಲಾಗಿದ್ದಾರೆ. ಇದೇ ರೀತಿ ತಾಪಮಾನ ಮುಂದುವರೆದರೆ ಪ್ರಾಣಿ, ಪಕ್ಷಿಗಳು ಬದುಕುವುದು ಹೇಗೆ ಎಂಬುದರ ಬಗ್ಗೆ ಜನರಲ್ಲಿ ಚಿಂತೆ ಮೂಡಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.