ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅವರು ಕನ್ನಡದ ಒಂದು ಚಿತ್ರಕ್ಕೆ ಸಪೋರ್ಟ್ ಮಾಡಿದ್ದಾರೆ. ಅಮೃಂತಅಂಜನ್ ಚಿತ್ರ ತಂಡಕ್ಕೆ ಕಾಲ್ ಮಾಡಿ. ಒಳ್ಳೆಯದಾಗಲಿ ಅಂತ ಹೇಳಿದ್ದಾರೆ. ಆ ವಿಷಯನ್ನ ಚಿತ್ರ ತಂಡವೇ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದೆ. ಈ ಚಿತ್ರದ ಬಗ್ಗೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಭಾರೀ ಸದ್ದು ಕೇಳಿ ಬರುತ್ತಿದೆ. ಪ್ರೀಮಿಯರ್ ಶೋದಲ್ಲಿ ಒಳ್ಳೆ ರೆಸ್ಪಾನ್ಸ್ ಪಡೆದ ಚಿತ್ರಗಳು ಹಿಟ್ ಆಗಿರೋ ಉದಾಹರಣೆಗಳಿವೆ. ಆ ಸಾಲಿಗೆ ಮೊದಲು ಕಾಂತಾರ ಚಿತ್ರ ಹಾಗೂ. ಸು ಫ್ರಮ್ ಸೋ ಚಿತ್ರವೂ ಇದೆ. ಇದೀಗ ಅಮೃತಅಂಜನ್ ಚಿತ್ರವೂ ಅದೇ ಹಾದಿಯಲ್ಲಿಯೇ ಇದೆ.
ರಾಕಿಂಗ್ ಸ್ಟಾರ್ ಯಶ್ ಅವರು ಅಮೃಂತಅಂಜನ್ ಸಿನಿಮಾಗೆ. ವಿಶ್ ಮಾಡಿ. ಸ್ಟೇಟಸ್ ಹಾಕಿ ಎನ್ಕರೇಜ್ ಮಾಡಿದ್ದಾರೆ. ಇಡೀ ಚಿತ್ರ ತಂಡದ ಕೆಲಸ ನೋಡಿದ್ದೇನೆ. ನಿಮ್ಮ ಈ ಹೊಸ ಕನಸು ಇತರರಿಗೂ ಸ್ಪೂರ್ತಿ ಆಗಲಿ ಅಂತಲೇ ಹೇಳಿದ್ದಾರೆ. ಯಶ್ ಇನ್ನು ಸಾಕಷ್ಟು ವಿಷಯವನ್ನ ಅಮೃತಅಂಜನ್ ತಂಡಕ್ಕೆ ಹೇಳಿದ್ದಾರೆ.
ನಾನು ನಿಮ್ಮ ಕೆಲಸವನ್ನು ನೋಡಿದ್ದೇನೆ. ಅದನ್ನ ಅಷ್ಟೆ ಎಂಜಾಯ್ ಮಾಡಿದ್ದೇನೆ. ನೀವು ದೊಡ್ಡ ದೊಡ್ಡ ಕನಸು ಕಾಣ್ತಿರೋದು ಖುಷಿಕೊಡುತ್ತಿದೆ. ನೀವು ಹೀಗೆ ಹೊಸದನ್ನ ಕೊಡ್ತಾನೇ ಇರಿ. ಹಾಗೆ ಈ ನಿಮ್ಮ ಜರ್ನಿ ಸಾಕಷ್ಟು ಹೇಳುತ್ತದೆ. ಅಮೃಂತಅಂಜನ್ ಚಿತ್ರದಲ್ಲಿ ಹೊಸಬರೇ ಇದ್ದಾರೆ. ಆದರೆ, ಇವರೆಲ್ಲ ಯುಟ್ಯೂಬ್ ಅಲ್ಲಿ ಭಾರೀ ಫೇಮಸ್ ಆಗಿದ್ದಾರೆ. ಹಾಸ್ಯಮಯ ಕಂಟೆಂಟ್ ಕ್ರಿಯೇಟ್ ಮಾಡುವ ಮೂಲಕವೇ ಎಲ್ಲರ ಹೃದಯ ಕದ್ದಿದ್ದಾರೆ. ನಿಮ್ಮ ಈ ಸಾಹಸ ಇತರಿಗೂ ಸ್ಪೂರ್ತಿ ಆಗುತ್ತದೆ ಅಂತ ಆಶಿಸುತ್ತೇನೆ. ನಿಮ್ಮಂತೆ ಕಂಟೆಂಟ್ ಕ್ರಿಯೇಟ್ ಮಾಡೋರಿಗೆ ಇದು ದೊಡ್ಡ ಕನಸು ಕಾಣುವಂತೆ ಮಾಡಲಿ. ನಿ