2026-03-07 12:12:56

Republic Day | ಗಣರಾಜ್ಯೋತ್ಸವದ ಭವ್ಯ ಮೆರವಣಿಗೆಯಲ್ಲಿ ಸೂರ್ಯಾಸ್ತ್ರ, ಭೈರವ..! | Speed News Kannada

Republic Day | ಗಣರಾಜ್ಯೋತ್ಸವದ ಭವ್ಯ ಮೆರವಣಿಗೆಯಲ್ಲಿ ಸೂರ್ಯಾಸ್ತ್ರ, ಭೈರವ..! | Speed News Kannada

ದೇಶದ ಜನರಿಗೆ ಗಣರಾಜ್ಯೋತ್ಸವದ ಶುಭಾಶಯ ಕೋರಿದ ಪ್ರಧಾನಿ ಮೋದಿ; ಕರ್ತವ್ಯ ಪಥದಲ್ಲಿ ಕೆಲವೇ ಹೊತ್ತಲ್ಲಿ ಧ್ವಜಾರೋಹಣ ಮಾಡಿದ್ದು ಗಣರಾಜ್ಯೋತ್ಸವದ 2026 ರ ಥೀಮ್ ನಲ್ಲಿ ಈ ಬಾರಿ ಗಣರಾಜ್ಯೋತ್ಸವವು ʼವಂದೇ ಮಾತರಂಗೆ 150 ವರ್ಷಗಳು ಮತ್ತು ಆತ್ಮ ನಿರ್ಭರ ಭಾರತ್‌ʼ ಎಂಬ ಥೀಮ್‌ನಡಿಯಲ್ಲಿ ಆಚರಿಸಲ್ಪಡುತ್ತದೆ. ಸ್ವತಂತ್ರ ಕಾ ಮಂತ್ರ: ವಂದೇ ಮಾತರಂ' ಎಂಬ ಥೀಮ್‌ಗಳು ವಿಶೇಷ ಟ್ಯಾಬ್ಲೋಗಳು ಮತ್ತು ಎಂ.ಎಂ. ಕೀರವಾಣಿ ಸಂಯೋಜಿಸಿದ ಮತ್ತು ಶ್ರೇಯಾ ಘೋಷಾಲ್ ಹಾಡಿದ ಹೊಸ ಸಂಗೀತ ಪ್ರಸ್ತುತಿ ಮತ್ತು 'ಸಮೃದ್ಧಿ ಕಾ ಮಂತ್ರ: ಆತ್ಮನಿರ್ಭರ ಭಾರತ' ಭಾರತದ ಸಮೃದ್ಧಿ ಮತ್ತು ಸ್ವಾವಲಂಬನೆಯತ್ತ ಪ್ರಯಾಣವನ್ನು ಎತ್ತಿ ತೋರಿಸುತ್ತಿವೆ.

77ನೇ ಗಣರಾಜ್ಯೋತ್ಸವದ ಆಚರಣೆ ಹಿನ್ನೆಲೆ ಇಂದು ದ್ರೌಪದಿ ಮುರ್ಮು ಅವರು ಕರ್ತವ್ಯ ಪಥದಲ್ಲಿ ಧ್ವಜಾರೋಹಣ ನಡೆಸಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಮತ್ತು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್‌ ಕೂಡ ಇದ್ದರು. ನಂತರ ಭವ್ಯವಾದ ಪರೇಡ್‌ ಆರಂಭವಾಗಿದೆ. ರಾಕೆಟ್‌ ಲಾಂಚರ್‌ ವ್ಯವಸ್ಥೆ ʼಸೂರ್ಯಾಸ್ತ್ರʼ, ಹೊಸದಾಗಿ ನಿರ್ಮಿತಗೊಂಡಿರುವ ಭೈರವ ಲೈಟ್‌ ಕಮಾಂಡೋ ಬೆಟ್ಯಾಲಿಯನ್‌, ಜನ್ಸ್ಕಾರ್ ಕುದುರೆಗಳು ಮತ್ತು ಬ್ಯಾಕ್ಟ್ರಿಯನ್ ಒಂಟೆಗಳು ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಂಡವು. ಸುಮಾರು 90 ನಿಮಿಷಗಳ ಕಾಲ ನಡೆಯಲಿರುವ ಮೆರವಣಿಗೆಯಲ್ಲಿ ಹದಿನೆಂಟು ಕವಾಯತುಗಳು ಮತ್ತು 13 ಬ್ಯಾಂಡ್‌ಗಳು ಭಾಗವಹಿಸಲಿವೆ ಅಂತ ರಕ್ಷಣಾ ಸಚಿವಾಲಯ ತಿಳಿಸಿದೆ. 77 ನೇ ಗಣರಾಜ್ಯೋತ್ಸವದ ಪರೇಡ್ ಈ ಬಾರಿ ಇನ್ನೂ ಹಲವು ಪ್ರಥಮಗಳನ್ನು ಕಾಣಲಿದೆ. ಮಿಶ್ರ ಸ್ಕೌಟ್ಸ್ ತುಕಡಿಯು ಸಹ ಮೊದಲ ಬಾರಿಗೆ ಪರೇಡ್‌ನ ಭಾಗವಾಗಲಿದೆ. ಅಷ್ಟೇ ಅಲ್ಲ, ಫಿರಂಗಿದಳದಲ್ಲಿ ಸ್ಥಾಪಿತಗೊಂಡಿರುವ ಶಕ್ತಿಬನ್ ರೆಜಿಮೆಂಟ್‌ನ ಪ್ರಥಮ ಪ್ರದರ್ಶನವೂ ನಡೆಯಲಿದ್ದು, ಹೊಸದಾಗಿ ಉನ್ನತೀಕರಿಸಲಾದ ರೆಜಿಮೆಂಟ್ ಡ್ರೋನ್‌, ಕೌಂಟರ್-ಡ್ರೋನ್ ಮತ್ತು ಲೋಯಿಟರ್ ಯುದ್ಧಸಾಮಗ್ರಿಗಳನ್ನು ಇದು ಹೊಂದಿದೆ.

ವಂದೇ ಮಾತರಂ ಮತ್ತು ಆತ್ಮನಿರ್ಭರ ಕಲ್ಪನೆಯಲ್ಲಿ ದೇಶದ ಸಂಸ್ಕೃತಿಯನ್ನು ಬಿಂಬಿಸುವ ಟ್ಯಾಬ್ಲೊಗಳು ಕರ್ತವ್ಯಪಥದಲ್ಲಿ ಸಾಗಲಿವೆ. ಆಪರೇಷನ್ ಸಿಂದೂರದ ಬಳಿಕ ನಡೆಯುತ್ತಿರುವ ಮೊದಲ ಗಣರಾಜ್ಯೋತ್ಸವ ಆಗಿರುವುದರಿಂದ ಈ ಬಾರಿ ಪರೇಡ್‌ನಲ್ಲಿ ಆಪರೇಷನ್‌ ಸಿಂದೂರ್: ವಿಕ್ಟರಿ ಥ್ ಜಾಯಿಂಟ್‌ನೆಸ್' ಎಂಬ ಶೀರ್ಷಿಕೆಯಲ್ಲಿ ಸೇನೆ ಟ್ಯಾಬ್ಲೊ ಪ್ರದರ್ಶಿಸಲಿದೆ. ಕರ್ನಾಟಕದಿಂದ ಯಾವುದೇ ಸ್ತಬ್ಧಚಿತ್ರ ಪ್ರದರ್ಶನ ಇಲ್ಲ. ಗಣರಾಜ್ಯೋತ್ಸವಕ್ಕೆ ವಿದೇಶಗಳಿಂದ ಅತಿಥಿಗಳು ಬರುತ್ತಾರೆ. ಅಂತೆಯೇ ಈ ಬಾರಿ ಯುರೋಪಿಯನ್ ಒಕ್ಕೂಟದ ಮುಖ್ಯ ಅತಿಥಿಗಳು ಭಾಗವಹಿಸಲಿದ್ದಾರೆ. ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಮತ್ತು ಯುರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.