ಬೆಂಗಳೂರು: ನಿರೀಕ್ಷಣಾ ಜಾಮೀನು ಪಡೆದು ಠಾಣೆಗೆ ಹೋಗಿದ್ದ ವ್ಯಕ್ತಿಯ ಮೇಲೆ ಪಿಎಸ್ಐ ಹಲ್ಲೆ ನಡೆಸಿರುವ ಘಟನೆ ಬೆಂಂಗಳೂರಿನ ಮಾಗಡಿ ರೋಡ್ ಠಾಣೆಯಲ್ಲಿ ನಡೆದಿದೆ.
ಪಿಎಸ್ಐ ಕೌಶಿಕ್ ವಿರುದ್ಧ ಆರೋಪ ಕೇಳಿಬಂದಿದ್ದು, ಮಾಗಡೀ ರೋಡ್ ಠಾಣೆಯಲ್ಲಿಯೇ ಕೌಶಿಕ್ ವಿರುದ್ಧ ಎಫ್ಐಆರ್ ದಾಖಲಾಗಿದೆ.ನಿರೀಕ್ಷಣಾ ಜಾಮೀನು ಪ್ರತಿ ಹಿಡಿದು ಠಾಣೆಗೆ ಬಂದಿದ್ದ ಆರೋಪಿ ಮೇಲೆ ಪಿಎಸ್ಐ ಕೌಶಿಕ್ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅವಿನಾಶ್ ಎಂಬಾತ ಕೋರ್ಟ್ ಮೂಲಕ ಪಿಎಸ್ಐ ವಿರುದ್ಧ ಖಾಸಗಿ ದೂರು ದಾಖಲಿಸಿದ್ದು, ಕೋರ್ಟ್ ಆದೇಶದಂತೆ ಪಿಎಸ್ಐ ಕೌಶಿಕ್ ವಿರುದ್ಧ ಎಫ್ಐಆರ್ ದಾಖಲಾಗಿದೆ.