ಗುಜರಾತ್: ರಾಮಜನ್ಮ ಭೂಮಿ ಅಯೋಧ್ಯೆಯ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ರಾಷ್ಟ್ರಪತಿ ದೌಪದಿ ಮುರ್ಮು ಅವರು ಭಕ್ತಿಪೂರ್ವಕ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ವೇಳೆ 150 ಕೆಜಿ ತೂಕದ, ಬಂಗಾರದ ಲೇಪನವಿರುವ ಶ್ರೀರಾಮ ಯಂತ್ರವನ್ನು ಮಂದಿರದಲ್ಲಿ ಸ್ಥಾಪಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಪಸ್ಥಿತರಿದ್ದರು. ಅನೇಕ ಗಣ್ಯರ ಸಮ್ಮುಖದಲ್ಲಿ ಈ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗಿದೆ.
ಬಾಲರಾಮನಿಗೆ ಸಮರ್ಪಿಸಲಾದ ಯಂತ್ರ ವಿಶೇಷತೆಯಿಂದ ಕೂಡಿದ್ದು ವೇದ ಗಣಿತದ ತತ್ವಗಳನ್ನಾಧರಿಸಿ ಸಿದ್ಧಪಡಿಸಲಾದ ಲೋಹದ ತಟ್ಟೆ ಸಕಾರಾತ್ಮಕ ಶಕ್ತಿಯ ಕೇಂದ್ರವಾಗಲಿದೆ. ಎಂದು ನಂಬಲಾಗಿದೆ. ಕಾಂಚಿ ಕಾಮಕೋಟಿ ಪೀಠದ ಮಾರ್ಗದರ್ಶನದಲ್ಲಿ ತಯಾರಾದ ಈ ಯಂತ್ರವನ್ನು ಎರಡು ವರ್ಷಗಳ ಹಿಂದೆಯೇ ತಿರುಪತಿಯಿಂದ ಅಯೋಧ್ಯೆಗೆ ತರಲಾಗಿತ್ತು.
ಈ ಎಲ್ಲಾ ಪೂಜಾ ಕಾರ್ಯಕ್ರಮದ ನಂತರ ರಾಷ್ಟ್ರಪತಿಗಳು ರಾಮಲಲ್ಲಾನಿಗೆ ಆರತಿ ಬೆಳಗಿ, ದೇಶದ ಜನರ ಸುಖ-ಶಾಂತಿಗಾಗಿ ಹರಸುವಂತೆ ಬೇಡಿಕೊಂಡರು. ಗಣ್ಯರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮ ಕ್ಷೇತ್ರದ ಆಧ್ಯಾತ್ಮಿಕ ಕಳೆಯನ್ನು ಇನ್ನಷ್ಟು ಹೆಚ್ಚಿಸಿತು.