ದೊಡ್ಡಬಳ್ಳಾಪುರ ನಗರದ ಬಸವ ಭವನದಲ್ಲಿ ಭಾನುವಾರ ನಡೆದ ಮದುವೆ ಕಾರ್ಯಕ್ರಮದಲ್ಲಿ ಹೈಡ್ರಾಮಾ ನಡೆದಿದೆ. ಮೊದಲ ಪತ್ನಿ ಇದ್ದರೂ ಎರಡನೇ ಮದುವೆಗೆ ಮುಂದಾಗಿದ್ದ ವರನ ಯೋಜನೆಯನ್ನು, ಏಳು ತಿಂಗಳ ಗರ್ಭಿಣಿ ಪತ್ನಿ ಮಂಟಪಕ್ಕೇ ಬಂದು ತಡೆದಿದ್ದಾರೆ.ಕೇರಳ ಮೂಲದ ಮಹಿಳೆಯನ್ನು ವರ್ಷ ಹಿಂದೆಯೇ ವಿವಾಹವಾಗಿದ್ದ ವರ ಕುಮಾರ್, ಮೊದಲ ಮದುವೆಯನ್ನು ಮರೆಮಾಚಿ ಮತ್ತೊಂದು ಮದುವೆಗೆ ಸಿದ್ಧತೆ ನಡೆಸಿದ್ದ ಎನ್ನಲಾಗಿದೆ.
ವಿಷಯ ತಿಳಿದ ಪತ್ನಿ ತಕ್ಷಣವೇ ಸ್ಥಳಕ್ಕೆ ಆಗಮಿಸಿ, ಮದುವೆಯ ದಾಖಲೆಗಳನ್ನು ತೋರಿಸಿ ನ್ಯಾಯಕ್ಕಾಗಿ ಆಗ್ರಹಿಸಿದರು. ಘಟನೆ ತಿಳಿಯುತ್ತಿದ್ದಂತೆಯೇ ದೊಡ್ಡಬಳ್ಳಾಪುರ ಟೌನ್ ಪೊಲೀಸ್ ಸ್ಥಳಕ್ಕೆ ಆಗಮಿಸಿ ವರನನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.ಒಟ್ಟಿನಲ್ಲಿ, ಮಂಟಪಕ್ಕೇ ಬಂದ ಗರ್ಭಿಣಿ ಪತ್ನಿಯ ಧೈರ್ಯದಿಂದ ಅನ್ಯಾಯ ಮದುವೆ ತಡೆಯಲ್ಪಟ್ಟಿದೆ