2026-03-07 05:55:02

Mother and Daughters Lives Were Taken By Threat! | ಬೆದರಿಕೆಗೆ ಹೋಯ್ತು ತಾಯಿ-ಮಗಳು ಎರಡು ಜೀವ! | Speed News Kannada

Mother and Daughters Lives Were Taken By Threat! | ಬೆದರಿಕೆಗೆ ಹೋಯ್ತು ತಾಯಿ-ಮಗಳು ಎರಡು ಜೀವ! | Speed News Kannada

ಮಂಡ್ಯ: ಊರು-ಕೇರಿ ಅಂದ್ಮೇಲೆ ಪಕ್ಕದ ಮನೆಯವರ ಜೊತೆ ಸಾಮಾನ್ಯವಾಗಿ ಜಗಳ ಇದ್ದೆ ಇರುತ್ತೆ. ಆದ್ರೆ ಈ ಜಗಳ ಸಾವಿನಲ್ಲಿ ಅಂತ್ಯ ಕಾಣೋದು ದುರಂತ ಆಗಿ ಹೋಗಿದೆ. ಪಕ್ಕದ ಮನೆಯವರ ಕಿರುಕುಳಕ್ಕೆ ಬೆದರಿ ಬೇಸತ್ತು ತಾಯಿ-ಮಗಳು ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿಯಲ್ಲಿ ಈ ಘಟನೆ ನಡೆದಿದೆ, ತಾಯಿ-ಮಗಳ ಸಾವು ಕಂಡು ಕುಟುಂಬಸ್ಥರು ಆಘಾತಗೊಂಡಿದ್ದಾರೆ. 
ಶಕುಂತಲಾದೇವಿ ತನ್ನ ಮಗಳ ಮದುವೆಗೆ ಸಿದ್ಧತೆ ಮಾಡಿಕೊಳ್ತಿದ್ರು.ಮಗಳು ಪ್ರಿಯಾಂಕಾ ಕೂಡ ಗಂಡನ ಮನೆ ಸೇರುವ ತವಕದಲ್ಲಿದ್ದಳು. ಆದ್ರೆ ಈ ಒಂದು ದುಡುಕಿನ ನಿರ್ಧಾರ ಇಬ್ಬರನ್ನ ಸಾವಿನ ಮನೆ ಸೇರಿಸಿದೆ. ಅಷ್ಟಕ್ಕೂ ನಿಜ್ವಾಗ್ಲೂ ನಡೆದಿರೋದು ಏನು ಪಕ್ಕದ ಮನೆಯವರು ನಿಜಕ್ಕೂ ಬೆದರಿಕೆ ಹಾಕಿದ್ರಾ? ಯಾವ ಕಾರಣಕ್ಕೆ ಕಿರುಕುಳ ಕೊಡ್ತಿದ್ರು ಎನ್ನುವ ವಿಚಾರ ಪೊಲೀಸ್ ತನಿಖೆಯಿಂದಲೇ ತಿಳಿಯಬೇಕಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.