2026-03-07 01:37:46

Maggi Pusthaka | ಮಗ್ಗಿಪುಸ್ತಕ ಬದುಕಿನ ಲೆಕ್ಕಾಚಾರ ಮೊಬೈಲ್ ಹಾಡು ಬಿಡುಗಡೆ ಪೆ 13ರಂದು ತೆರೆಗೆ | Speed News Kannada

Maggi Pusthaka | ಮಗ್ಗಿಪುಸ್ತಕ ಬದುಕಿನ ಲೆಕ್ಕಾಚಾರ  ಮೊಬೈಲ್ ಹಾಡು ಬಿಡುಗಡೆ  ಪೆ 13ರಂದು ತೆರೆಗೆ | Speed News Kannada

ಹರಿವರಾಸನಂ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಚಿತ್ರ ಮಗ್ಗಿಪುಸ್ತಕ ಇದೇ ೧೩ರಂದು ರಾಜ್ಯಾದ್ಯಂತ ತೆರೆಕಾಣಲಿದೆ.   ಚಿನ್ನಸ್ವಾಮಿ ಫಿಲಂಸ್ ಬ್ಯಾನರ್ ಅಡಿ ಸಿ.. ಎತಿರಾಜ್ ಸ್ನೇಹಿತರ ಜತೆಸೇರಿ ಈ ಚಿತ್ರ  ನಿರ್ಮಿಸಿದ್ದಾರೆ. ಜತೆಗೆ ನಿರ್ದೇಶಕರೂ  ಕೈಜೋಡಿಸಿದ್ದಾರೆ. ಮೊಬೈಲ್ ಬಗ್ಗೆ ಮಾಡಿರುವ  ಮಗ್ಗಿಪುಸ್ತಕ ಚಿತ್ರದ ಮೂರನೇ ಹಾಡು ಇತ್ತೀಚೆಗೆ  ಬಿಡುಗಡೆಯಾಯಿತು, ಈ ಸಂದರ್ಭದಲ್ಲಿ  ಮಾತನಾಡಿದ ನಿರ್ದೇಶಕ ಹರಿವರಾಸನಂ, ನಾನು ಸುಮಾರು 17 ವರ್ಷಗಳಿಂದ  20ಕ್ಕೂ ಹೆಚ್ಚು  ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ, ಇದು  ನನ್ನ ನಿರ್ದೇಶನದ ಮೊದಲ ಚಿತ್ರ. 
ಮಗ್ಗಿ ಪುಸ್ತಕ ಮಕ್ಕಳ ಚಿತ್ರವಲ್ಲ, ಬದುಕಿನ ಲೆಕ್ಕಾಚಾರ, ನಮ್ಮ ಜೀವನವೇ ಒಂದು ಮಗ್ಗಿಪುಸ್ತಕ ಇದ್ದಂತೆ, ಇದರಲ್ಲಿ ಒಳ್ಳೆದನ್ನು  ಕೂಡಬೇಕು, ಕೆಟ್ಟದ್ದನ್ನು ಕಳೆಯಬೇಕು, ಜ್ಞಾನವನ್ನು ಗುಣಿಸಬೇಕು, ಅಜ್ಞಾನವನ್ನು ಭಾಗಿಸಬೇಕು ಎಂದು ಹೇಳಿದ್ದೇನೆ.  ಕೋವಿಡ್ ಟೈಮಲ್ಲಿ ನಾನು  ಬರೆದ ಅವನಿ ಎಂಬ ಕಾದಂಬರಿಯನ್ನು  ಆಧರಿಸಿ ಮಾಡಿದ  ಚಿತ್ರವಿದು. ಇದು ನಾಲ್ಕು ಆಯಾಮಗಳಲ್ಲಿ  ನಡೆಯುವ ಹೈಪರ್ ಲಿಂಕ್  ಚಿತ್ರ. ಜೀವನದ ಲೆಕ್ಕಾಚಾರ ಇದರಲ್ಲಿದೆ.
 ಎಂದು  ಹೇಳಿದರು,  ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ರಕ್ಷಾಗೌಡ ಮಾತನಾಡುತ್ತ ಈಗಾಗಲೇ ರಾಧಾರಮಣ, ಪುಟ್ಮಲ್ಲಿ  ಸೀರಿಯಲ್‌ಗಳಲ್ಲಿ ಅಭಿನಯಿಸಿದ್ದೆ, ಈ ಚಿತ್ರದಲ್ಲಿ ತಾಯಿಯಾಗಿ ನಟಿಸಿದ್ದೇನೆ. ತಾಯಿಯ ಪಾತ್ರ ಅನ್ನೋದಕ್ಕಿಂತ ಚಾಲೆಂಜಿಂಗ್ ಪಾತ್ರ ಅದಾಗಿತ್ತು ಎಂದು ವಿವರಿಸಿದರು, ನಂತರ ನಟ  ಕೃಷ್ಣ ಮಹೇಶ್ ಮಾತನಾಡುತ್ತ  ಇದರಲ್ಲಿ  ನಾನು ನೆಗೆಟಿವ್ ಪಾತ್ರ ಮಾಡಿದ್ದೇನೆ, ಹರಿ ಈ ಸಿನಿಮಾ ಮಾಡಲು ತುಂಬಾ ಕಷ್ಟಪಟ್ಟಿದ್ದಾರೆ, ಇದೊಂದು ಬ್ರಿಡ್ಜ್ ಸಿನಿಮಾ. ನಾಲ್ಕು ವೇನಲ್ಲಿ ಸಾಗುವ ಚಿತ್ರದ ಕಥೆ ಕ್ಲೈಮ್ಯಾಕ್ಸ್ ನಲ್ಲಿ ಒಂದೆಡೆ ಸೇರುತ್ತದೆ, ಮೊಬೈಲ್‌ ಹೆಚ್ಚು ಬಳಸುವುದರಿಂದ ಏನೇನೆಲ್ಲ ಆಗುತ್ತದೆ, ಅದರ ಅನುಕೂಲ, ಅನಾನುಕೂಲತೆಗಳೇನು ಎಂಬುದನ್ನು ಚಿತ್ರದಲ್ಲಿ ತೋರಿಸಿದ್ದೇನೆ ಎಂದು ಹೇಳಿದರು,  ನಿರ್ಮಾಪಕ ಯತಿರಾಜ್ ಮಾತನಾಡುತ್ತ ಇದು ನಮ್ಮ ನಿರ್ಮಾಣದ ಮೊದಲ ಚಿತ್ರ, ಎಲ್ಲರೂ ಪ್ರೋತ್ಸಾಹಿಸಿ ಎಂದು ಹೇಳಿದರು,  ನಂತರ ದಡ್ಡ ಪ್ರವೀಣ್ ಖ್ಯಾತಿಯ  ರಂಜಿತ್ ಕಾಸರಗೋಡು,  ವರ್ಧನ್ ತೀರ್ಥಳ್ಳಿ, ರಾನ್ವಿ ಶೇಖರ್ ತಂತಮ್ಮ ಪಾತ್ರಗಳ ಕುರಿತಂತೆ ಮಾತನಾಡಿದರು, ಬೆಂಗಳೂರು, ಮೈಸೂರು, ಮಂಗಳೂರು, ನಂಜನಗೂಡು, ಶ್ರೀರಂಗಪಟ್ಟಣ, ಹೆಚ್.ಡಿ.ಕೋಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ಸುಮಾರು 80 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ, ಮಗ್ಗಿಪುಸ್ತಕ  ಚಿತ್ರದಲ್ಲಿ ಒಟ್ಟಿ 7 ಹಾಡುಗಳಿದ್ದು, 17 ಜನ ಸಿಂಗರ್ಸ್ ಹಾಡಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.