ಹೊರ್ಮುಜ್ ದಾಟುತ್ತಿದ್ದ ಭಾರತೀಯ ಹಡಗುಗಳ ಮೇಲೆ ಇರಾನ್ ದಾಳಿ ನಡೆಸಿದೆ. ಭಾರತದ ಹಡಗುಗಳ ಮೇಲೆ ಇರಾನ್ ನೌಕಾಸೇನೆ ಗುಂಡಿನ ದಾಳಿಯನ್ನು ನಡೆಸಿದೆ. ಹೊರ್ಮುಜ್ ಜಲಸಂಧಿಯನ್ನು ಮತ್ತೆ ಮುಚ್ಚಲಾಗಿದೆ. ಅದನ್ನು ಸಮೀಸುವ ಯಾವುದೇ ಹಡಗನ್ನು ಟಾರ್ಗೆಟ್ ಮಾಡಿ ಹೊಡೆಯಲಾಗುವುದು ಎಂದು ಇರಾನ್ ಎಚ್ಚರಿಕೆಯನ್ನು ನೀಡಿದೆ. ಹೊರ್ಮುಜ್ ಜಲಸಂಧಿ ಮೂಲಕ ಬರುತ್ತಿದ್ದ 2 ಹಡಗುಗಳ ಮೇಲೆ ಇರಾನ್ ನೌಕಸೇನೆ ಗನ್ಬೋಟ್ಗಳಿಂದ ಗುಂಡಿನ ಸುರಿಮಳೆ ಸಿಡಿಸಿದೆ. ದಾಳಿಯಲ್ಲಿ ಸದ್ಯ ಯಾರಿಗೂ ಗಾಯಗಲಾಗಿಲ್ಲ ಎಂದು ಮಾಹಿತಿ ತಿಳಿದುಬಂದಿದ್ದು, ಭಾರತೀಯ ಹಡಗುಗಳ ಮೇಲೆ ದಾಳಿ ಮಾಡುವುದು ಅಲ್ಲದೇ ಭಾರತ ತೆರಳುತ್ತಿದ್ದ 14 ಹಡಗುಗಳನ್ನು ಇರಾನ್ ತಡೆಹಿಡಿದಿದೆ. ಇದರಿಂದಾಗಿ ಭಾರತೀಯ ವಿದೇಶಾಂಗ ಇಲಾಖೆಯು ಇರಾನ್ ರಾಯಭಾರಿಗೆ ಬುಲಾವ್ ನೀಡಿದೆ.