2026-03-07 05:02:22

G. Parameshwara Alleges | ದ್ವೇಷ ಭಾಷಣ ತಡೆ ಬಿಲ್ ಜಾರಿಯಾಗಬಾರದೆಂದೆ ರಾಜ್ಯಪಾಲರು ವಾಪಸ್ ಕಳುಹಿಸಿದ್ದಾರೆ : ಜಿ.ಪರಮೇಶ್ವರ್ ಆರೋಪ | Speed News Kannada

G. Parameshwara Alleges | ದ್ವೇಷ ಭಾಷಣ ತಡೆ ಬಿಲ್ ಜಾರಿಯಾಗಬಾರದೆಂದೆ ರಾಜ್ಯಪಾಲರು ವಾಪಸ್ ಕಳುಹಿಸಿದ್ದಾರೆ : ಜಿ.ಪರಮೇಶ್ವರ್ ಆರೋಪ | Speed News Kannada

ಬೆಂಗಳೂರು : ದ್ವೇಷ ಭಾಷಣ ತಡೆ ಬಿಲ್ ಗೆ ರಾಜ್ಯಪಾಲರು ಅಂಕಿತ ಹಾಕದ ವಿಚಾರವಾಗಿ 28 ಅಂಶಗಳನ್ನು ಪ್ರಶ್ನೆ ಮಾಡಿ ಅದನ್ನು ರಾಷ್ಟ್ರಪತಿಗೆ ಕಳುಹಿಸಿದ್ದಾರೆ. ರಾಷ್ಟ್ರಪತಿಗಳು ಅಬ್ಬರ್ವೇಷನ್ ಗೆ ವಾಪಸ್ ಕಳುಹಿಸಿದರ ನೋಡಬೇಕು ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು.ಬೆಂಗಳೂರಲ್ಲಿ ಮಾತನಾಡಿದ ಅವರು, ವಾಕ್ ಸ್ವಾತಂತ್ರ್ಯ ಎಲ್ಲರಿಗೂ ಇದೆ ಹಾಗಂತ ಏನು ಬೇಕಾದರೂ ಮಾತನಾಡುವುದು ತಪ್ಪು. ಸಮಾಜದ ಮೇಲೆ ಅದು ಯಾವ ರೀತಿಯ ಪರಿಮಾಣ ಬೀರುತ್ತೆ ವ್ಯಕ್ತಿ ಮತ್ತು ಸಮುದಾಯದ ಬಗ್ಗೆ ಮಾತನಾಡುವುದು ಎಷ್ಟು ಪರಿಣಾಮ ಬೀರುತ್ತೆ ಇದೆಲ್ಲಾ ಯೋಚನೆ ಮಾಡಿ ದ್ವೇಷ ಭಾಷಣ ತಡೆ ಬಿಲ್ ಮಾಡಿದ್ದು ಎಂದರು.
ರಾಜ್ಯದ ಹಲವು ಭಾಗಗಳಲ್ಲಿ ಕೆಲವರು ಭಾಷಣವನ್ನು ಮಾಡಿದ್ದರು ಭಾಷಣ ಮಾಡಿದ ಮೇಲೆ ಏನಾಗಿದೆ ಅಂತ ನಾವು ಗಮನಿಸಿದ್ದೇವೆ ಇದಕ್ಕೆ ಕಡಿವಾಣ ಹಾಕುವುದಕ್ಕೆ ಆ ಬಿಲ್ ಅನ್ನು ನಾವು ತಂದಿದ್ದು ನಿಮ್ಮ ಉದ್ದೇಶ ಏನಿದೆ? ಯಾರು ಏನಾದರೂ ಮಾಡಬಹುದಾ? ಎಂದು ಪರಮೇಶ್ವರ್ ಪ್ರಶ್ನೆ ಮಾಡಿದರು. ಉದ್ದೇಶಪೂರ್ವಕವಾಗಿ ಈ ಕಾಯಿದೆ ಜಾರಿಗೆ ಬರಬಾರದು ಅಂತ ನೆನೆಗುದಿಗೆ ಬೀಳಿಸಬೇಕು ಅಂತಾನೆ ರಾಜ್ಯಪಾಲರು ಕಳುಹಿಸಿದ್ದಾರೆ ಮುಂದಿನ ದಿನಗಳಲ್ಲಿ ಯಾವ ರೀತಿ ಆಗುತ್ತೆ ಅಂತ ನೋಡೋಣ ಮುಂದೆ ಸರಿ ಹೋಗಬಹುದು ಎಂಬ ಭಾವನೆ ಇದೆ ಎಂದು ಗೃಹ ಸಚಿವ ಜಿ ಪರಮೇಶ್ವ‌ರ್ ತಿಳಿಸಿದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.