2026-07-16 02:27:30

DK SHIVAKUMAR SIDDARAMAIAH | ದೆಹಲಿ ಭೇಟಿಗೂ ಮುನ್ನ ಸಿದ್ದು ಸಿಎಂ ಸಮಾಲೋಚನೆ ಸಂಪುಟ ವಿಸ್ತರಣೆಗೆ ಜಂಟಿ ರಣತಂತ್ರ | SNK

DK SHIVAKUMAR SIDDARAMAIAH | ದೆಹಲಿ ಭೇಟಿಗೂ ಮುನ್ನ ಸಿದ್ದು ಸಿಎಂ ಸಮಾಲೋಚನೆ ಸಂಪುಟ ವಿಸ್ತರಣೆಗೆ ಜಂಟಿ ರಣತಂತ್ರ | SNK

ಬೆಂಗಳೂರು: ದೆಹಲಿ ಪ್ರವಾಸ ಕೈಗೊಳ್ಳುವ ಮುನ್ನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು (ಜುಲೈ.15) ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸ 'ಕಾವೇರಿ'ಗೆ ಭೇಟಿ ನೀಡಿ ಸುದೀರ್ಘ ಸಮಾಲೋಚನೆ ನಡೆಸಿದರು. ಈ ಮಹತ್ವದ ಭೇಟಿಯ ನಂತರ ಉಭಯ ನಾಯಕರು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರೊಂದಿಗೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

ಜುಲೈ 16ರ ಗುರುವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖಂಡರಾದ ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಅವರ ಸಮ್ಮುಖದಲ್ಲಿ ಸಂಪುಟ ರಚನೆ ಕುರಿತು ಮೊದಲ ಹಂತದ ಮಾತುಕತೆ ನಡೆಯಲಿದೆ. ಸದ್ಯ ಡಾರ್ಜಲಿಂಗ್ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಅವರ ಅನುಪಸ್ಥಿತಿಯಲ್ಲಿ ಪ್ರಾದೇಶಿಕ ಸಮತೋಲನ ಮತ್ತು ಜಾತಿಸೂತ್ರಗಳ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ಕುರಿತು ಪ್ರಾಥಮಿಕ ಚರ್ಚೆಗಳು ನಡೆಯಲಿವೆ.

ಆ ನಂತರ ಡಾರ್ಜಲಿಂಗ್‌ನಿಂದ ರಾಹುಲ್ ಗಾಂಧಿ ಮರಳಿದ ಬಳಿಕ ಮೊದಲ ಸಭೆಯ ವರದಿಯನ್ನು ಆಧರಿಸಿ ಅಂತಿಮ ಸುತ್ತಿನ ಚರ್ಚೆಗಳು ನಡೆಯಲಿದ್ದು, ಅವರ ಅನುಮೋದನೆಯೊಂದಿಗೆ ಹೊಸ ಸಚಿವರ ಪಟ್ಟಿ ಅಂತಿಮಗೊಳ್ಳಲಿದೆ. ದೆಹಲಿ ಮಟ್ಟದ ಈ ಬಿರುಸಿನ ಚಟುವಟಿಕೆಗಳು ಆಕಾಂಕ್ಷಿಗಳಲ್ಲಿ ತೀವ್ರ ಕುತೂಹಲ ಮೂಡಿಸಿವೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.