2026-03-07 02:07:15

Darshan gets a release | ದರ್ಶನ್ ಗೆ ಬಿಡುಗಡೆ ಭಾಗ್ಯ ಕ್ರೇಜಿಸ್ಟಾರ್‌ ರವಿಚಂದ್ರನ್‌ ಭವಿಷ್ಯ ಅಭಿಮಾನಿಗಳು ಫುಲ್‌ ಖುಷ್ | Speed News Kannada

Darshan gets a release | ದರ್ಶನ್ ಗೆ ಬಿಡುಗಡೆ ಭಾಗ್ಯ ಕ್ರೇಜಿಸ್ಟಾರ್‌ ರವಿಚಂದ್ರನ್‌ ಭವಿಷ್ಯ ಅಭಿಮಾನಿಗಳು ಫುಲ್‌ ಖುಷ್ | Speed News Kannada

ಬೆಂಗಳೂರು: "ಡಿ-ಬಾಸ್ ದರ್ಶನ್‌” ಇನ್ನೆರಡು ತಿಂಗಳಲ್ಲಿ ಜೈಲಿನಿಂದ ಹೊರಬರುತ್ತಾರೆ  ಎಂದು ಕ್ರೇಜಿಸ್ಟಾರ್‌ ರವಿಚಂದ್ರನ್‌ ಭವಿಷ್ಯ ನುಡಿದಿದ್ದಾರೆ. ಅವರ ಭವಿಷ್ಯ ನಿಜವಾದಲ್ಲಿ ಛಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಎಲ್ಲರಿಗೂ ದರ್ಶನ ನೀಡಲಿದ್ದಾರೆ.
ಇತ್ತೀಚೆಗೆ ಕುಣಿಗಲ್‌ನಲ್ಲಿ ನಡೆದ ಶಿವರಾತ್ರಿ ಸ್ವರಾಭಿಷೇಕ ಕಾರ್ಯಕ್ರಮದಲ್ಲಿ ರವಿಚಂದ್ರನ್ ಈ ಭವಿಷ್ಯ ನುಡಿದಿದ್ದಾರೆ.
ಕಾರ್ಯಕ್ರಮ ಆರಂಭವಾಗಿ ರವಿಚಂದ್ರನ್‌ ಮಾತನಾಡಲು ಆಗಮಿಸುತ್ತಿದ್ದಂತೆ ಅಭಿಮಾನಿಗಳು 'ಡಿ-ಬಾಸ್.. ಡಿ-ಬಾಸ್' ಎಂದು ಕೂಗಲು ಆರಂಭಿಸಿದರು. ಆಗ  ರವಿಮಾಮ ಭಾವುಕರಾಗಿ ಪ್ರತಿಕ್ರಿಯಿಸಿದರು. 
ʼನಾನು ಈ ಬಾಯಲ್ಲಿ ಹೇಳಿದ್ದೀನಿ, ಬರ್ತಾರೆ ನೆನಪಿಟ್ಟುಕೊ. ನಿನಗವನು ಡಿ-ಬಾಸ್ ಇರಬಹುದು, ಆದರೆ ಆ ಡಿ-ಬಾಸ್ ನನಗೆ ಮಗ ಇದ್ದಂತೆ. ಒಂದು ಕೆಟ್ಟ ಘಳಿಗೆ ಮನುಷ್ಯನನ್ನು ಕುಗ್ಗಿಸುತ್ತದೆ. ಆದರೆ ದೇವರಿಗೆ ಪೂಜೆ ಮಾಡಿ, ಅವನು ಖಂಡಿತ ಮೇಲೆದ್ದು ಬರ್ತಾನೆ" ಎಂದರು. 
ರವಿಚಂದ್ರನ್ ಅವರ ಈ ಮಾತುಗಳು ದರ್ಶನ್ ಅಭಿಮಾನಿಗಳಲ್ಲಿ ಹೊಸ ಚೈತನ್ಯ ಮೂಡಿಸಿರುವುದಂತೂ ಸುಳ್ಳಲ್ಲ.
ಅಂದಹಾಗೆ ಇಂದು ದರ್ಶನ್‌ ಹುಟ್ಟುಹಬ್ಬ ಆಚರಿಸಲಾಗಿದೆ. ಸಡಗರ ಸಂಭ್ರಮ ಮನ ಮಾಡಿದ್ದರೂ ದೈಹಿಕವಾಗಿ ಅವರು ನಮ್ಮೊಂದಿಗಿಲ್ಲ, ಜೈಲಿನಲ್ಲಿದ್ದಾರೆ ಎಂಬ ನೋವು ಕಾಡಿದ್ದಂತೂ ನಿಜ!

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.