ಚಿತ್ರದುರ್ಗ: ಜಿಲ್ಲೆಯ ಡಿವಿಎಸ್ ರೆಸಿಡೆನ್ಷಿಯಲ್ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಕೊಟ್ರೇಶ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈತ ಶಾಲೆಯ ವಸತಿ ನಿಲಯದ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪೊಲೀಸರು ಶಾಲಾ ಆಡಳಿತ ಮತ್ತು ಇತರರ ವಿರುದ್ಧ ನಿರ್ಲಕ್ಷ್ಯದ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಘಟನೆ ನಿನ್ನೆ ಬೆಳಗ್ಗೆ ಸುಮಾರು 7:15ಕ್ಕೆ ನಡೆದಿದೆ.
ವಿದ್ಯಾರ್ಥಿಯ ತಂದೆ ಶಾಲಾ ಆಡಳಿತ ಮಂಡಲಿ, ವಾರ್ಡನ್, ಮುಖ್ಯೋಪಾಧ್ಯಾಯ ಹಾಗೂ ಸಹಪಾಠಿಯ ವಿರುದ್ಧ ದೂರು ದಾಖಲಿಸಿದ್ದಾರೆ.
ತಮ್ಮ ಮಗ ಸಹಪಾಠಿಯೊಬ್ಬನ ಜತೆ ಜಗಳವಾಡಿಕೊಂಡಿದ್ದ. ಆ ವೇಳೆ ಸಹಪಾಠಿ ಚಪ್ಪಲಿಯಿಂದ ಹೊಡೆದು, ಕಬ್ಬಿಣದ ರಾಡ್ನಿಂದ ದಾಳಿ ಮಾಡಲು ಪ್ರಯತ್ನಿಸಿದ್ದಾನೆ ಎಂದು ತಂದೆ ಆರೋಪಿಸಿದ್ದಾರೆ. ಆತ್ಮಹತ್ಯೆಗೂ ಮುನ್ನ ವಿದ್ಯಾರ್ಥಿ ಅಲ್ಲಿ ಹಲವಾರು ಬಾರಿ ಓಡಾಡಿದ್ದಾನೆ. ಆ ಒತ್ತಡದಲ್ಲಿ ಇದ್ದಂತೆ ಕಂಡು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ವಿದ್ಯಾರ್ಥಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ವಿದ್ಯಾರ್ಥಿಯ ಸಾವಿಗೆ ಕಾರಣವನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.