2026-03-07 05:05:14

Bird fly in Chennai | ಚೆನ್ನೈನಲ್ಲಿ ಹಕ್ಕಿ ಜ್ವರ ಸಾವಿರಾರು ಕಾಗೆಗಳ ಸಾವು ಕರ್ನಾಟಕದಲ್ಲೂ ಆತಂಕ | Speed News kannada

Bird fly in Chennai | ಚೆನ್ನೈನಲ್ಲಿ ಹಕ್ಕಿ ಜ್ವರ ಸಾವಿರಾರು ಕಾಗೆಗಳ ಸಾವು ಕರ್ನಾಟಕದಲ್ಲೂ ಆತಂಕ | Speed News kannada

ಚೆನ್ನೈ: ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಹಕ್ಕಿ ಜ್ವರ (H5N1) ಕಾಣಿಸಿಕೊಂಡಿದ್ದು, ಸಾವಿರಕ್ಕೂ ಹೆಚ್ಚು ಕಾಗೆಗಳು ಮೃತಪಟ್ಟಿವೆ. ಇದರಿಂದ ಕರ್ನಾಟಕದಲ್ಲೂ ಆತಂಕ ಶುರುವಾಗಿದೆ. 
ಭೋಪಾಲ್‌ನ ಐಸಿಎಆರ್-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸಸ್ (NIHSAD) ಪ್ರಯೋಗಾಲಯದಲ್ಲಿ ಮಾದರಿ ಪರೀಕ್ಷೆ ನಡೆದಿದೆ. ಈ ವರದಿ ಪ್ರಕಾರ ತಮಿಳುನಾಡಿನ ಕಾಗೆಗಳಲ್ಲಿ ರೋಗಕಾರಕ ಹಕ್ಕಿ ಜ್ವರ ಅಥವಾ ಏವಿಯನ್ ಇನ್‌ಫ್ಲುಯೆಂಜಾ (H5N1) ಇರುವುದು ದೃಢಪಟ್ಟಿದೆ. 
ಕಳೆದ ತಿಂಗಳು ತಮಿಳುನಾಡು ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು ಪ್ರಾಣಿ ರೋಗ ಗುಪ್ತಚರ ಘಟಕವು ಸಲ್ಲಿಸಿದ ವರದಿಯಲ್ಲಿ ಕಾಗೆಯ ಮಾದರಿಗಳಲ್ಲಿ (ಕಾಗೆಯ ರಕ್ತ /ಅವಶೇಷಗಳ ಮಾದರಿಗಳು) H5N1 ವೈರಸ್ ಪತ್ತೆಯಾಗಿರುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಸತ್ತ ಪಕ್ಷಿಗಳನ್ನು ಭೂಮಿಯ ಆಳದಲ್ಲಿ ಹೂಳಲು ಸೂಚನೆ ನೀಡಲಾಗಿತ್ತು. 
ಬೆಸೆಂಟ್ ಸ್ಮಾರಕ ಪ್ರಾಣಿ ಚಿಕಿತ್ಸಾಲಯದ (BMAD) ಶ್ರವಣ್ ಕೃಷ್ಣನ್ ಅವರು ಕಳೆದ ಕೆಲವು ವಾರಗಳಲ್ಲಿ ನಗರದಲ್ಲಿ 1,000-1,500 ಕಾಗೆಗಳು ಸಾವನ್ನಪ್ಪಿರಬಹುದು ಎಂದು ಹೇಳಿದ್ದಾರೆ. ಪ್ರತಿದಿನ ನಮಗೆ ಅಸಹಜವಾಗಿ ಕಾಗೆಗಳು ಸಾವನ್ನಪ್ಪುತ್ತಿರುವ ಬಗ್ಗೆ ವರದಿಗಳು ಬರುತ್ತಿವೆ. ಜನರು ಅನಾರೋಗ್ಯ ಪೀಡಿತ ಕಾಗೆಗಳನ್ನು ನಮ್ಮ ಸಂಸ್ಥೆಗೆ ನಿಯಮಿತವಾಗಿ ತರುತ್ತಿದ್ದಾರೆ. ಇಂದು ಮೂರು ಕಾಗೆಗಳನ್ನು ತಂದಿದ್ದಾರೆ ಎಂದು ತಿಳಿಸಿದ್ದಾರೆ. 
ಮುನ್ನೆಚ್ಚರಿಕೆ ಕ್ರಮಗಳು: 

ಮೃತಪಟ್ಟ ಪಕ್ಷಿಗಳ ಮೃತದೇಹಗಳನ್ನು ವೈಜ್ಞಾನಿಕವಾಗಿ ಆಳವಾಗಿ ಭೂಮಿಯಲ್ಲಿ ಹೂಳಬೇಕು. ಪಕ್ಷಿಗಳ ಆವಾಸಸ್ಥಾನಗಳ ಸಮೀಪ ವಾಸಿಸುವ, ಕೋಳಿ ಫಾರಂ ಅಥವಾ ಪ್ರಾಣಿಗಳೊಂದಿಗೆ ಕೆಲಸ ಮಾಡುವ ಜನರಿಗೆ ಸೋಂಕು ತಗುಲದಂತೆ ಮುನ್ನೆಚ್ಚರಿಕೆ ವಹಿಸಬೇಕು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.