ಸಿಲಿಕಾನ್ ಸಿಟಿ ಬೆಂಗಳೂರಿಗೆ ಹಲವು ವರ್ಷಗಳಿಂದ ಅಂಟಿಕೊಂಡಿರುವ ಶಾಪ ಅಂದ್ರೆ ಅದು ಕಸ. ಈ ಸಮಸ್ಯೆಯಿಂದ ಬೆಂಗಳೂರಿಗೆ ಗಾರ್ಬೇಜ್ ಸಿಟಿ ಹೆಸರು ಮಾತ್ರ ಹೋಗ್ತಾನೆ ಇಲ್ಲ. ಹೀಗೆ ಘನತ್ಯಾಜ ನಿರ್ವಹಣೆ ನಿಯಮ ಮತ್ತಷ್ಟು ಬಿಗಿಗೊಳಿಸಲು ಗ್ರೇಟರ್ ಬೆಂಗಳೂರು ಪ್ರಧಿಕಾರ (GBA) ಪಾಲನೆ ಮಾಡಿಲ್ಲ ಅಂದ್ರೆ ಮುಂದಾಗಿದೆ. ಅದುವೇ ಬೆಂಗಳೂರು ಜನತೆ ಕಸ ವಿಂಗಡಣೆ ನಿಯಮ ಪಾಲನೆ ಅಂದ್ರೆ ಸಾವಿರಾರು ರೂಪಾಯಿ ದಂಡ ಬಿಳೋದು ಗ್ಯಾರಂಟಿ..
ಹೌದು .. ಗಾರ್ಡನ್ ಸಿಟಿಗೆ ಗಾರ್ಬೇಜ್ನದ್ದೇ ಟೆನ್ಷನ್ ಆಗಿದೆ. ಹೀಗಾಗಿ ಏಪ್ರಿಲ್ 1ರಿಂದಲೇ ಮನೆಮನೆಗಳಲ್ಲಿ ಕಸ ವಿಂಗಡಣೆ ಕಡ್ಡಾಯಗೊಳಿಸಲಾಗಿತ್ತು. ಕಸ ವಿಂಗಡಣೆ ಮಾಡಿಕೊಡಿ ಅಂದರೂ ಕೆಲವರು ತಲೆ ಕಡಿಸಿಕೊಳ್ಳುತ್ತಿಲ್ಲ. ಹೀಗೆ ನಗರದಲ್ಲಿ ಕಸ ನಿರ್ವಹಣೆ ನಿಯಮ ಬಿಗಿಗೊಳಿಸಲು ಜಿಬಿಎ ಮುಂದಾಗಿದೆ. ಹೊಸ ನಿಯಮದಂತೆ ಹಸಿ, ಒಣ ತ್ಯಾಜ್ಯವನ್ನ ವಿಂಗಡಣೆ ನೀಡದ್ದರೆ 1 ಸಾವಿರ ರೂ ದಂಡ ವಿಧಿಸಲಾಗುತ್ತದೆ ಎಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ ನಿಗಮ ಎಚ್ಚರಿಸಿದೆ.
ಹೊಸ ನಿಯಮದಂತೆ ಹಸಿ,ಒಣ, ನೈರ್ಮಲ್ಯ ಹಾಗೂ ವಿಶೇಷ ತ್ಯಾಜ್ಯವನ್ನ ಪ್ರತೇಕವಾಗಿ ವಿಂಗಡಿಸಿ