2026-04-23 07:51:57

Auto driver robbed as escape from rehab|ರಿಹ್ಯಾಬ್‌ನಿಂದ ಎಸ್ಕೇಪ್ ಆಗಿ ಆಟೋ ಚಾಲಕನ ದರೋಡೆ|Speed News Kannada

Auto driver robbed as escape from rehab|ರಿಹ್ಯಾಬ್‌ನಿಂದ ಎಸ್ಕೇಪ್ ಆಗಿ ಆಟೋ ಚಾಲಕನ ದರೋಡೆ|Speed News Kannada

ನಗರದ ಹೊರವಲಯದಲ್ಲಿ ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗಿದ್ದ ಇಬ್ಬರು ಯುವಕರು ಅಪರಾಧ ಕೃತ್ಯಕ್ಕೆ ಮುಂದಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬಾಗಲೂರು ಪೊಲೀಸ್ ಠಾಣೆ ಇದರ ಬಗ್ಗೆ ಮಾಹಿತಿ ನೀಡಿದೆ. ಮಾರ್ಚ್ 1ರಂದು ಎಲೆಕ್ಟ್ರಾನಿಕ್ಸ್ ಸಿಟಿಯ ರಾಯಸಂದ್ರ ನಿವಾಸಿ ಆಟೋ ಚಾಲಕ ದರ್ಶನ ಸಿ.ಆರ್ ಅವರನ್ನು ಒಂದು ತಿಂಗಳ ಹಿಂದೆ ಪುನರ್ವಸತಿ ಕೇಂದ್ರದಿಂದ ತಪ್ಪಿಸಿಕೊಂಡ ಇಬ್ಬರು ಯುವಕರು ದರೋಡೆ ಮಾಡಿದರು.


ಚಾಲಕನು 1,080 ರೂ. ದರ ಕೇಳಿದಾಗ, ಇಬ್ಬರು ಪ್ರಯಾಣಿಕರು ಹಣ ಕೊಡುತ್ತೇವೆ ಎಂದಿದ್ದರು. ಆದರೆ ಅಪ್ರಾಪ್ತ ಬಾಲಕ ಚಾಲಕನ ಗಮನ ಬೇರೆಡೆಗೆ ಸೆಳೆಯುವ ವೇಳೆ, ಕನೀಶ್ ಕಲ್ಲಿನಿಂದ ಚಾಲಕನ ತಲೆಗೆ ಹೊಡೆದು ಹಲ್ಲೆ ಮಾಡಿ ನಾಲ್ಕು ಹಲ್ಲುಗಳನ್ನು ಮುರಿದು ನಗದು, ಎರಡು ಮೊಬೈಲ್ ಮತ್ತು ಆಟೋ ಕದ್ದರು.ಇನ್ಸ್‌ಪೆಕ್ಟರ್ ಅಶೋಕ್ ನೇತೃತ್ವದ ತನಿಖಾ ತಂಡ ಮಾರ್ಚ್ 25ರಂದು ಹಾರ್ಲೂರು ಸಮೀಪದ ಪುನರ್ವಸತಿ ಕೇಂದ್ರದಿಂದ ಕನೀಶ್‌ನನ್ನು ಬಂಧಿಸಿಲಾಗಿದೆ. ಕದ್ದ ಆಟೋ ಕೋಲಾರದಲ್ಲಿ 5,000 ರೂ.ಗೆ ಮಾರಾಟ ಮಾಡಲಾಗಿತ್ತು.

ಆರೋಪಿಗಳಿಬ್ಬರೂ ಹಣವನ್ನು ಮದ್ಯ ಹಾಗೂ ಸಿಗರೇಟುಗಳಿಗೆ ಖರ್ಚು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಕನೀಶ್ ರಿಹ್ಯಾಬ್ ಕೇಂದ್ರಕ್ಕೆ ಮರಳಿರುವುದನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದು, ಅಪ್ರಾಪ್ತ ಸಹಚರ ಇನ್ನೂ ಪರಾರಿಯಾಗಿದ್ದಾರೆ. ಕದ್ದು ಆಟೋವನ್ನು ವಶಪಡಿಸಲಾಗಿದೆ. ಪೊಲೀಸರ ತನಿಖೆ ಮುಂದುವರಿಯುತ್ತಿದ್ದು, ಅಪರಾಧಿಗಳಿಗೆ ತಕ್ಷಣ ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.