ಕಲಬುರಗಿ: ನಗರದ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ತಪಾಸಣೆ ನಡೆಸಿದಾಗ ಸುವ 3 ಸ್ಮಾರ್ಟ್ ಫೋನ್ ಹಾಗೂ 2 ಏರ್ ಬಡ್ಸ್ಗಳು ಪತ್ತೆಯಾಗಿವೆ. ಪೊಲೀಸ್ ಅಧಿಕಾರಿಗಳು ಅನಿರೀಕ್ಷಿತ ತಪಾಸಣೆ ನಡೆಸಿದಾಗ ಈ ವಸ್ತುಗಳು ಪತ್ತೆಯಾಗಿವೆ.
ಶೌಚಾಲಯವೇ ಇವರ ಸೇಫ್ ಲಾಕರ್!
ಪೊಲೀಸರು ಜೈಲಿನ ಮೂಲೆ ಮೂಲೆಯನ್ನು ಜಾಲಾಡಿದಾಗ ಯಾರಿಗೂ ಅನುಮಾನ ಬಾರದಂತೆ ಕೈದಿಗಳು ಪ್ಲಾನ್ ಮಾಡಿ, ಜೈಲಿನ ಶೌಚಾಲಯದ ಒಳಗೆ ತಮ್ಮ ಮೊಬೈಲ್ ಹಾಗೂ ಏರ್ ಬಡ್ಸ್ಗಳನ್ನು ಬಚ್ಚಿಟ್ಟಿದ್ಧಾರೆ.
ಜೈಲಿನ ವಾರ್ಡನ್ ಬಸವರಾಜ, ಅಧೀಕ್ಷಕ ರಾಕೇಶ್ ಸೇರಿದಂತೆ 42 ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಇತ್ತೀಚೆಗೆ ಅನಿರೀಕ್ಷಿತ ತಪಾಸಣೆ ನಡೆಸಿದ್ದರು. ಈ ವೇಳೆ ಜೈಲಿನ ವಿಚಾರಣಾಧೀನ ಕೈದಿಗಳಾದ ಶ್ರೀನಿವಾಸ ಗಣೇಶ್, ಪ್ರದೀಪ್ ಅಲಿಯಾಸ್ ದಾಸರಹಳ್ಳಿ ಪ್ರದೀಪ್ ಹಾಗೂ ದಿನೇಶ್ ಅಲಿಯಾಸ್ ಡಿಯೋ ದಿನಿ ನಿಷೇಧಿತ ವಸ್ತುಗಳನ್ನು ಅಕ್ರಮವಾಗಿ ಹೊಂದಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜೈಲಿನ ನಿಯಮಗಳನ್ನು ಗಾಳಿಗೆ ತೂರಿ, ಹೊರಜಗತ್ತಿನ ಜೊತೆ ಸಂಪರ್ಕ ಸಾಧಿಸಲು ಸ್ಮಾರ್ಟ್ ಫೋನ್ಗಳನ್ನು ಬಳಸುತ್ತಿದ್ದರು ಎಂಬುದು ತನಿಖೆಯಲ್ಲಿ ದೃಡವಾಗಿದೆ. ಈ ಸಂಬಂಧ ಆರೋಪಿಗಳ ವಿರುದ್ದ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.