ಇಂಡಿಯನ್ ಪ್ರಿಮೀಯರ್ ಲೀಗ್ನ 19ನೇ ಆವೃತ್ತಿಯಲ್ಲಿ ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಮತ್ತು ಎಲ್ಎಸ್ಜಿ ಮುಖಾಮುಖಿ ಆಗಲಿದೆ. ಆರ್ಸಿಬಿ ಇಲ್ಲಿಯವರೆಗೂ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಇಂದಿನ ಪಂದ್ಯ ವೀಕ್ಷಿಸಲು ಅಭಿಮಾನಿಗಳು ಕಾತುರದಿಂದ ಕಾಯುತ್ತಾ ಇದ್ದಾರೆ. ಈಗಾಗಲೇ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ಅಭಿಮಾನಿಗಳು ಜಮಾಯಿಸಿದ್ದು, ಆರ್ಸಿಬಿ ತಂಡ ಗೆದ್ದು ಬರಬೇಕು, ಎಂದು ಆರ್ಸಿಬಿ ಕುರಿತು ಜೈಕಾರ ಕೂಗುತ್ತಿದ್ದಾರೆ. ಇನ್ನೂ ಸ್ಟೇಡಿಯಂ ಸುತ್ತ ನಡೆಯುವ ಚಿಕ್ಕ ಪುಟ್ಟ ಘಟನೆಗಳನ್ನು ನಿಭಾಯಿಸಲು ಪೊಲೀಸ್ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ. ಆರ್ಸಿಬಿ ಹಾಗೂ ಎಲ್ಎಸ್ಜಿ ಇಂದು ಹಣಾಯಣಿಯಾಗಲಿದ್ದು, ಆರ್ಸಿಬಿ ಇಂದಿನ ಪಂದ್ಯದಲ್ಲಿ ಜಯಗಳಿಸಿದರೆ ಟೇಬಲ್ ಪಾಯಿಂಟ್ನಲ್ಲಿ ಆಗ್ರ ಸ್ಥಾನಕ್ಕೆ ಏರಲಿದೆ.