ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ನೇ ಆವೃತ್ತಿಯನ್ನು ಹೀನಾಯ ಸೋಲಿನ ಮೂಲಕ ಆರಂಭಿಸಿದೆ. ಸಿಎಸ್ಕೆ ಸದ್ಯ ಆಡಿರುವ ಮೂರು ಪಂದ್ಯಗಳನ್ನು ಸೋತಿದೆ. ಭಾನುವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ವಿರುದ್ಧದ ಪಂದ್ಯದಲ್ಲಿ ಸಿಎಸ್ಕೆ ಸೋಲು ಕಂಡ ಬೆನ್ನಲ್ಲೇ, ರವಿಚಂದ್ರನ್ ಅಶ್ವಿನ್ ಸಿಎಸ್ಕೆ ಜೊತೆಗಿನ ತಮ್ಮ ಕಳೆದ ಆವೃತ್ತಿಯ ಬಗ್ಗೆ ಮಾತನಾಡಿದ್ದಾರೆ. ಆರ್ ಅಶ್ವಿನ್ ಕಳೆದ ಆವೃತ್ತಿಯ ನಂತರ ಟಿ20 ಲೀಗ್ನಿಂದ ನಿವೃತ್ತಿ ಘೋಷಿಸಿದರು. ಆರ್ಸಿಬಿ ವಿರುದ್ಧ ಸಿಎಸ್ಕೆ ಸೋತಿದ್ದನ್ನು ನೋಡಿದ ಅಶ್ವಿನ್, ಈ ವರ್ಷ ಫ್ರಾಂಚೈಸಿ ಪರ ಆಡುವುದನ್ನು ಮುಂದುವರಿಸಬಹುದಿತ್ತು. ಆದರೆ, ಮಾನಸಿಕವಾಗಿ ದಣಿದಿದ್ದೇನೆ ಎಂದಿದ್ದಾರೆ.
'ದುಃಖದ ಹಾಡುಗಳಿಗೆ ಏನಾದರೂ ಸಲಹೆಗಳಿವೆಯೇ? ನಾನು ಪಂದ್ಯವನ್ನು ತಟಸ್ಥ ದೃಷ್ಟಿಕೋನದಿಂದ ನೋಡುತ್ತಿದ್ದೇನೆ. ಆದರೆ, ಇತ್ತೀಚೆಗೆ ನಾನು CSK ಜೊತೆ ನಿರಾಶಾದಾಯಕ ಆವೃತ್ತಿಯನ್ನು ಕಳೆದಿದ್ದೇನೆ ಎಂಬುದನ್ನು ನೆನಪಿಡಿ. ಇದು ವೈಯಕ್ತಿಕವಾಗಿ ನನಗೂ ನಿರಾಶಾದಾಯಕ ಆವೃತ್ತಿಯಾಗಿತ್ತು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನನ್ನ ಮನಸ್ಸಿನಲ್ಲಿ, ನಾನು ಇನ್ನೂ ಹೆಚ್ಚಿನದನ್ನು ಆಡಬಹುದಿತ್ತು ಎನಿಸುತ್ತಿದೆ. ಏಕೆಂದರೆ ನನಗೆ ಆಡಲು ಭಾವನಾತ್ಮಕವಾಗಿ ಬ್ಯಾಂಡ್ವಿಡ್ತ ಇರಲಿಲ್ಲ' ಎಂದು ಆರ್ ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದರು. ಕಳೆದ ವರ್ಷ ಏನಾಯಿತು ಎಂಬುದರ ಕುರಿತು ಸ್ವಲ್ಪ ಮಾತನಾಡಲು ವಿಮಲ್ ಕುಮಾರ್ ಒತ್ತಾಯಿಸಿದಾಗ ಅಶ್ವಿನ್, 'ನಾನು ಮತ್ತೆ ಅಲ್ಲಿಗೆ ಹೋಗಲು ಬಯಸುವುದಿಲ್ಲ, ಅದು ಮಾನಸಿಕವಾಗಿ ತೊಂದರೆ ನೀಡಿದೆ. ಅದು ನನಗೆ ತುಂಬಾ ನೋವನ್ನುಂಟುಮಾಡಿತು. ನಾನು ಸ್ವಲ್ಪ ಯೋಚಿಸಿದ ನಂತರ, 'ನಾನು ಚೆನ್ನೈನಲ್ಲಿ ಪ್ರಾರಂಭಿಸಿದೆ. ನನ್ನ ಊರಿನಲ್ಲಿಯೇ ಮುಗಿಸುತ್ತಿದ್ದೇನೆ, ಪರವಾಗಿಲ್ಲ ಎಂದುಕೊಂಡೆ. ನನ್ನನ್ನು ಉಳಿಸಿಕೊಳ್ಳಬೇಕೆ ಅಥವಾ ಬಿಡುಗಡೆ ಮಾಡಬೇಕೆ ಎಂಬ ಬಗ್ಗೆ ಅವರಿಗೆ (ಮ್ಯಾನೇಜ್ಮೆಂಟ್) ತಲೆನೋವು ಬೇಡವೆಂದೇ, ನಾನು ನಿವೃತ್ತಿ ಹೊಂದಲು ನಿರ್ಧರಿಸಿದೆ. ತನ್ನ ನಿರ್ಧಾರವು ತಂಡದ ₹10 ಕೋಟಿ ಹಣವನ್ನು ಉಳಿಸುತ್ತದೆ ಎಂದು ಅವರು ಸುಳಿವು ನೀಡಿದರು. ಅದರ ಹೊರತಾಗಿಯೂ, ನನ್ನ ನಿರೀಕ್ಷೆಗಳು ಈಡೇರದ ಕಾರಣ ನಾನು ನಿರಾಶೆಗೊಂಡಿದ್ದೆ' ಎಂದು ಹೇಳಿದರು.
'ಇಂದಿನ ಪಂದ್ಯದಲ್ಲೂ ನನಗೆ ಸಿಎಸ್ಕೆ ಉತ್ತಮ ಪ್ರದರ್ಶನ ನೀಡಬಹುದೆಂಬ ನಿರೀಕ್ಷೆಗಳಿದ್ದವು. ಆದರೆ, ಆರ್ಸಿಬಿ ಗೆಲ್ಲುತ್ತದೆ ಎಂದು ನಾನು ಭಾವಿಸಿದೆ. ಏಕೆಂದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಲಿಷ್ಠವಾಗಿರುವುದರಿಂದ ಅವರು ಗೆಲ್ಲುತ್ತಾರೆ ಎಂದಿದ್ದೆ. ಆದರೂ, ಚೆನ್ನೈ ಸೂಪರ್ ಕಿಂಗ್ಸ್ ತಮ್ಮ ಹಿಂದಿನ ಪಂದ್ಯಕ್ಕಿಂತಲೂ ಈ ಪಂದ್ಯದಲ್ಲಿ ಮತ್ತಷ್ಟು ಸುಧಾರಿಸುತ್ತದೆ ಎಂದೇ ಭಾವಿಸಿದ್ದೆ. ವಿರಾಮದ ನಂತರ ಆರ್ಸಿಬಿ ಸ್ವಲ್ಪ ದುರ್ಬಲವಾಗಿರಬಹುದು ಎಂದು ಭಾವಿಸಿದೆ. ಆದರೆ ವಾಸ್ತವದಲ್ಲಿ ಆರ್ಸಿಬಿ ಎಷ್ಟು ಚೆನ್ನಾಗಿ ಆಡಿತು ಎಂದರೆ ಅವರು ಎಲ್ಲ ತಂಡಗಳಿಗೆ ಬಲವಾದ ಎಚ್ಚರಿಕೆ ನೀಡಿದರು' ಎಂದು ಅವರು ಹೇಳಿದರು.
ಈ ಆವೃತ್ತಿಯ ಆರಂಭಕ್ಕೂ ಮುನ್ನ, ಸಿಎಸ್ಕೆ ತಂಡದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿತು. ಯುವ ಆಟಗಾರರ ಮೇಲೆ ಅವಲಂಬಿತವಾಗಿತ್ತು, ಸಾಂಪ್ರದಾಯಿಕವಾಗಿ ಅಪೇಕ್ಷಣೀಯ ಫಲಿತಾಂಶಗಳನ್ನು ನೀಡಲು ಅನುಭವಿ ಆಟಗಾರರ ಮೇಲೆಯೂ ಹೆಚ್ಚು ಅವಲಂಬಿತವಾಗಿತ್ತು. ಆದಾಗ್ಯೂ, ಆಡಳಿತ ಮಂಡಳಿಯು ಈ ಆಟಗಾರರನ್ನು ಹೇಗೆ ಬಳಸುತ್ತಿದೆ ಎಂಬುದರ ಬಗ್ಗೆ ಅಶ್ವಿನ್ ಅತೃಪ್ತರಾಗಿದ್ದಾರೆ. 'ಈ ಯುವ ಆಟಗಾರರಿಗೆ ನೀವು ಉತ್ತಮ ಅಭ್ಯಾಸ, ಹೆಚ್ಚಿನ ತೀವ್ರತೆಯ ತರಬೇತಿ ಮತ್ತು ಬಲವಾದ ಪಂದ್ಯದಂತಹ ವಾತಾವರಣ ನೀಡಬೇಕು. ಈ ಪರಿಸ್ಥಿತಿಗಳನ್ನು ನೀವು ಒದಗಿಸದಿದ್ದರೆ, ಅವರು ಹೇಗೆ ಸುಧಾರಿಸುತ್ತಾರೆ?' ಎಂದು ಅಶ್ವಿನ್ ಪ್ರಶ್ನಿಸಿದರು. ಸಿಎಸ್ಕೆ ಬೌಲರ್ಗಳು ತಮ್ಮದಲ್ಲದ ಕೆಲಸಗಳನ್ನು ಪಿಚ್ನಲ್ಲಿ ಏಕೆ ಮಾಡುತ್ತಿದ್ದಾರೆ. ಅನ್ನುಲ್ ಕಾಂಬೋಜ್ ಮತ್ತು ಜೇಮೀ ಓವರ್ಟನ್ ಸ್ಟಂಪ್ಗಳ ಸುತ್ತಲೂ ವೈಡ್ ಯಾರ್ಕ್ರಳನ್ನು ಎಸೆಯುವ ನಿರ್ಧಾರವನ್ನು ಅವರು ಪ್ರಶ್ನಿಸಿದರು. 'SA20 ವಿರುದ್ಧ ಯೋಜಿಸಲು ನೀವು ನೋಡಬಹುದು. ಜೀಮೀ ಓವರ್ಟನ್ ಯಾರ್ಕಗರ್ಳನ್ನು ಎಸೆಯುವಲ್ಲಿ ಉತ್ತಮ ಬೌಲರ್ ಅಲ್ಲ. ನೀವು ಅವರನ್ನು ಹಾಗೆ ಮಾಡುವಂತೆ ಮಾಡುತ್ತಿದ್ದೀರಿ.. ನೀವು ಬೌಲರ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಆಡಿಸಬೇಕು. ನೀವು ಅವರನ್ನು ಸ್ಟಂಪ್ಗಳ ಸುತ್ತಲೂ ವೈಡ್ ಯಾರ್ಕಗ್ರಳನ್ನು ಎಸೆಯುವಂತೆ ಮಾಡುತ್ತಿದ್ದೀರಿ. ಟಿಮ್ ಡೇವಿಡ್ ಅವುಗಳನ್ನು ಬಲವಾಗಿ ಹೊಡೆದರು' ಎಂದು ಅವರು ತಂಡವನ್ನು ಟೀಕಿಸಿದರು.