2026ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ ಸಂಕಲ್ಪ ಪತ್ರವನ್ನು ಬಿಡುಗಡೆ ಮಾಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಪ್ರಣಾಳಿಕೆಯನ್ನು ಅನಾವರಣಗೊಳಿಸಿದರು.“ಸೋನಾರ್ ಬಾಂಗ್ಲಾ” ಪರಿಕಲ್ಪನೆಯಡಿ ರೂಪಿಸಿದ ಈ ಪ್ರಣಾಳಿಕೆಯಲ್ಲಿ ರಾಜ್ಯವನ್ನು ಹತಾಶೆಯಿಂದ ಅಭಿವೃದ್ಧಿಯತ್ತ ಕೊಂಡೊಯ್ಯುವ ಗುರಿ ಹೊಂದಲಾಗಿದೆ ಎಂದು ಬಿಜೆಪಿ ತಿಳಿಸಿದೆ.
ಪ್ರಣಾಳಿಕೆಯಲ್ಲಿ ಐದು ವರ್ಷಗಳಲ್ಲಿ ಒಂದು ಕೋಟಿ ಉದ್ಯೋಗ ಸೃಷ್ಟಿ, ನಿರುದ್ಯೋಗಿಗಳಿಗೆ ₹10,000 ನೆರವು ಹಾಗೂ ಮಹಿಳೆಯರಿಗೆ ಮಾಸಿಕ ₹3,000 ಆರ್ಥಿಕ ಸಹಾಯದ ಭರವಸೆ ನೀಡಲಾಗಿದೆ.ಇದರ ಜೊತೆಗೆ ಮಹಿಳಾ ಸುರಕ್ಷತೆಗೆ ವಿಶೇಷ ಪೊಲೀಸ್ ಪಡೆ, ಸರ್ಕಾರಿ ಉದ್ಯೋಗಗಳಲ್ಲಿ 33% ಮೀಸಲಾತಿ ಹಾಗೂ “ದುರ್ಗಾ ಸುರಕ್ಷಾ ಸಹಾಯ” ಯೋಜನೆ ಘೋಷಿಸಲಾಗಿದೆ.
ರೈತರಿಗೆ ಬೆಂಬಲ ಬೆಲೆ, ಮೀನುಗಾರರಿಗೆ ಉತ್ತೇಜನ, ಕೈಗಾರಿಕಾ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳನ್ನೂ ಪ್ರಸ್ತಾಪಿಸಲಾಗಿದೆ.ಆಯುಷ್ಮಾನ್ ಭಾರತ್ ಜಾರಿಗೊಳಿಸುವುದರೊಂದಿಗೆ AIIMS, IIT, IIM ಸಂಸ್ಥೆಗಳ ವಿಸ್ತರಣೆಗೂ ಒತ್ತು ನೀಡಲಾಗಿದೆ.ಈ ವೇಳೆ ಆಡಳಿತಾರೂಢ ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, ಬದಲಾವಣೆಗೆ ಜನ ಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ.