2026-04-23 10:56:23

Akshay Kumar had an affair with a famous actress even after marriage | ವಿವಾಹದ ಬಳಿಕವೂ ಖ್ಯಾತ ನಟಿ ಜೊತೆ ಸಂಬಂಧ ಹೊಂದಿದ್ದ ಅಕ್ಷಯ್ ಕುಮಾ‌ರ್ | Speed News Kannada

Akshay Kumar had an affair with a famous actress even after marriage | ವಿವಾಹದ ಬಳಿಕವೂ ಖ್ಯಾತ ನಟಿ ಜೊತೆ ಸಂಬಂಧ ಹೊಂದಿದ್ದ ಅಕ್ಷಯ್ ಕುಮಾ‌ರ್ | Speed News Kannada

ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ಖಾಸಗಿ ಜೀವನದ ಕಾರಣಕ್ಕೆ ಆಗಾಗ ಸುದ್ದಿ ಆಗುತ್ತಾರೆ. ಈಗಲೂ ಸಹ, ನಟ ಅಕ್ಷಯ್ ಕುಮಾರ್ ಅವರ ಖಾಸಗಿ ಜೀವನ ಚರ್ಚೆ ಆಗುತ್ತದೆ. ಒಂದು ಕಾಲದಲ್ಲಿ ಅಕ್ಷಯ್ ಕುಮಾರ್ ಒಬ್ಬ ಪ್ರಸಿದ್ದ ಮತ್ತು ಜನಪ್ರಿಯ ನಟಿಯನ್ನು ಪ್ರೀತಿಸುತ್ತಿದ್ದರು. ಆದರೆ ಅವರ ಪತ್ನಿ ಟ್ವಿಂಕಲ್ ಖನ್ನಾ ಅವರಿಗೆ ಅಕ್ಷಯ್ ಅವರ ಸಂಬಂಧದ ಬಗ್ಗೆ ತಿಳಿದಾಗ, ನಟನ ಜೀವನದಲ್ಲಿ ದೊಡ್ಡ ಬಿರುಗಾಳಿ ಎದ್ದಿತು. ಅಕ್ಷಯ್ ಅವರ ಸಂಬಂಧದದಲ್ಲಿ ಇದ್ದ ನಟಿ ಬೇರೆ ಯಾರೂ ಅಲ್ಲ, ನಟಿ ಪ್ರಿಯಾಂಕಾ ಚೋಪ್ರಾ. ಪ್ರಿಯಾಂಕಾ ಮತ್ತು ಅಕ್ಷಯ್ 'ಅಂದಾಜ್', 'ಐತ್ರಾಜ್' ಮತ್ತು 'ವಕ್ಸ್: ದಿ ರೇಸ್ ಎಗೇನ್ಸ್ ಟೈಮ್' ನಂತಹ ಹಲವು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಈ ಜೋಡಿಯ ಜೋಡಿಯನ್ನು ಅಭಿಮಾನಿಗಳು ಕೂಡ ಇಷ್ಟಪಟ್ಟರು. ಏತನ್ಮಧ್ಯೆ, ಅವರ ಪ್ರೇಮ ಸಂಬಂಧದ ವದಂತಿಗಳು ಹಬ್ಬಿದವು. ಇದು ನಟನ ವೈಯಕ್ತಿಕ ಜೀವನದ ಮೇಲೆ ಹೆಚ್ಚಿನ ಪರಿಣಾಮ ಬೀರಿತು.
ನಿರ್ದೇಶಕ ಸುನಿಲ್ ದರ್ಶನ್ ಅವರು ಸಂದರ್ಶನವೊಂದರಲ್ಲಿ ಅಕ್ಷಯ್ ಮತ್ತು ಪ್ರಿಯಾಂಕಾ ಅವರ ಪ್ರೇಮದ ವಿಷಯವನ್ನು ಹೇಳಿದರು. ಇದು ಮತ್ತೆ ಚರ್ಚೆಗೆ ಕಾರಣವಾಗಿಯಿತು. 1995 ರಲ್ಲಿ ಬಿಡುಗಡೆಯಾದ 'ಬರ್ಸಾತ್' ಚಿತ್ರದಲ್ಲಿ ನಟಿ ಟ್ವಿಂಕಲ್, ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿದ್ದರು. ಸುನಿಲ್ ದರ್ಶನ್, ಪ್ರಿಯಾಂಕಾ ಮತ್ತು ಬಾಬಿ ಅವರೊಂದಿಗೆ 'ಬರ್ಸಾತ್' ಎಂಬ ಶೀರ್ಷಿಕೆಯಡಿಯಲ್ಲಿ ಸಿನಿಮಾ ಮಾಡಿದರು. ಮೊದಲು ಈ ಚಿತ್ರಕ್ಕೆ ಅಕ್ಷಯ್ ಆಯ್ಕೆ ಆಗಿದ್ದರು, ಆದರೆ, ಕುಟುಂಬದಲ್ಲಿ ವಿವಾದ ಎದ್ದಿದ್ದರಿಂದ ಅವರು ಈ ಸಿನಿಮಾ ಬಿಡಬೇಕಾಯಿತು. ಸುನಿಲ್ ದರ್ಶನ್ ಈ ಬಗ್ಗೆ ಮಾತನಾಡಿದ್ದಾರೆ. 'ವಿವಾಹಿತ ವ್ಯಕ್ತಿಯ ಜವಾಬ್ದಾರಿ ಹೆಚ್ಚಾಗಿರುತ್ತದೆ. ಉದ್ಯಮದಲ್ಲಿ ಕೆಲಸ ಮಾಡುವ ಜನರಿಗೆ ಪರಿಸ್ಥಿತಿಯ ಅರಿವಿರುತ್ತದೆ. ಆದರೂ, ಅವರು ತಮ್ಮದೇ ಆದ ಮಿತಿಗಳನ್ನು ಮೀರುತ್ತಾರೆ ಮತ್ತು ಅದು ಅವರ ಖಾಸಗಿ ಜೀವನದ ಮೇಲೆ ಪರಿಣಾಮ ಬೀರುತ್ತದೆ' ಎಂದು ಹೇಳಿದರು. 'ಪ್ರತಿಯೊಬ್ಬ ನಟನೂ ತನ್ನ ವೃತ್ತಿ ಮತ್ತು ಅವಕಾಶಗಳ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ', ನಿಜ ಹೇಳಬೇಕೆಂದರೆ, 'ಬರ್ಸಾತ್' ಚಿತ್ರದ ಸಂಪೂರ್ಣ ಹಾಡನ್ನು ಅಕ್ಷಯ್ ಕುಮಾ‌ರ್ ಮತ್ತು ಪ್ರಿಯಾಂಕಾ ಚೋಪ್ರಾ ಅವರೊಂದಿಗೆ ಚಿತ್ರೀಕರಿಸಲಾಗಿದೆ. ಆದರೆ ಅಕ್ಷಯ್ ಚಿತ್ರವನ್ನು ನಿರಾಕರಿಸಿದ ನಂತರ ಹಾಡನ್ನು ಮತ್ತೆ ಬಾಬಿ ಮತ್ತು ಪ್ರಿಯಾಂಕಾ ಅವರೊಂದಿಗೆ ಚಿತ್ರೀಕರಿಸಲಾಗಿತ್ತು' ಎಂದಿದ್ದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.