2026-03-07 07:17:19

A petty fight over just touching a foot ends in murder | ಜಸ್ಟ್ ಕಾಲು ಟಚ್ ಆಗಿದ್ದಕ್ಕೆ ಕಿರಿಕ್ ಕ್ಷುಲ್ಲಕ ಜಗಳ ಕೊ*ಲೆಯಲ್ಲಿ ಅಂತ್ಯ | Speed News Kannada

A petty fight over just touching a foot ends in murder | ಜಸ್ಟ್ ಕಾಲು ಟಚ್ ಆಗಿದ್ದಕ್ಕೆ ಕಿರಿಕ್ ಕ್ಷುಲ್ಲಕ ಜಗಳ ಕೊ*ಲೆಯಲ್ಲಿ ಅಂತ್ಯ | Speed News Kannada

ಬೆಂಗಳೂರು: ಸಣ್ಣ ವಾಗ್ವಾದವೊಂದು ಭೀಕರ ಹತ್ಯೆಗೆ  ಕಾರಣವಾಗಿದೆ. ಬೆಂಗಳೂರಿನ  ಬಸವೇಶ್ವರ ನಗರದ ತಿಮ್ಮಯ್ಯ ರಸ್ತೆಯಲ್ಲಿರುವ ಶ್ರೀಗುರು ರಾಘವೇಂದ್ರ ದೋಸೆ ಕ್ಯಾಂಪ್‌ನಲ್ಲಿ  ಈ ದುರ್ಘಟನೆ ಸಂಭವಿಸಿದೆ. ರಾತ್ರಿ ಸುಮಾರು 10 ಗಂಟೆಗೆ ಊಟಕ್ಕೆ ಬಂದಿದ್ದ ಲೋನ್ ರಿಕವರಿ ಏಜೆಂಟ್ ಶಶಿಕುಮಾ‌ರ್ , ಊಟ ಮುಗಿಸಿ ಹೊರಬರುವಾಗ ಅಜಾಗರೂಕತೆಯಿಂದ ಮಂಜುನಾಥ್‌ಗೆ ಕಾಲು ತಗುಲಿತ್ತು.
ಈ ಸಣ್ಣ ಘಟನೆ ಜಗಳಕ್ಕೆ ತಿರುಗಿ, ಹೋಟೆಲ್ ಮಾಲೀಕರು ಮಧ್ಯಸ್ಥಿಕೆ ವಹಿಸಿ ಇಬ್ಬರನ್ನೂ ಬೇರ್ಪಡಿಸಿದ್ದರು. ಆದರೆ ಕೋಪ ತಣ್ಣಗಾಗದ ಮಂಜುನಾಥ್ ತನ್ನ ಸಹೋದರ ಭವ್ಯರಾಜ್‌ಗೆ ಕರೆ ಮಾಡಿ ಶಸ್ತ್ರಾಸ್ತ್ರದೊಂದಿಗೆ ಬರಲು ಹೇಳಿದ್ದಾನೆ. ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕಾಗಮಿಸಿದ ಅಣ್ಣ-ತಮ್ಮಂದಿರು ಶಶಿಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ವೇಳೆ ತೀವ್ರವಾಗಿ ಇರಿತಕ್ಕೊಳಗಾದ ಶಶಿಕುಮಾರ್ ರಕ್ತದ ಮಡುವಿನಲ್ಲಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲ್ಪಟ್ಟರೂ ಪ್ರಾಣ ಬದುಕುಳಿಯಲಿಲ್ಲ. ಈ ಘಟನೆ ಸಂಬಂಧ ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಇನ್ನು ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಯತೀಶ್ ತಿಳಿಸಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.